Thursday, September 19, 2024

ಪ್ರಾಯೋಗಿಕ ಆವೃತ್ತಿ

ಶ್ರೀ ವೆಂಕಟರಮಣ ದೇವಸ್ಥಾನಕ್ಕೆ 1ಲಕ್ಷ ದೇಣಿಗೆ ನೀಡಿದ ಬಿ.ಆರ್.ರಾಮಚಂದ್ರು

ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಳಿದೇಗಲು ಗ್ರಾಮದ ಶ್ರೀ ವೆಂಕಟರಮಣ ದೇವಸ್ಥಾನದ ಪುನರ್ ನಿರ್ಮಾಣ, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವನಾಯಕ ಮತ್ತು ಮನ್ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರುರವರು ಗುದ್ದಲಿ ಪೂಜೆ ನೆರವೇರಿಸಿ ಶ್ರೀ ವೆಂಕಟರಮಣ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ 1,00,000 ರೂ.(ಒಂದು ಲಕ್ಷ) ಗಳನ್ನು ಸಮಿತಿಗೆ ದೇಣಿಗೆಯಾಗಿ ನೀಡಿದರು.

ನಂತರ ಮಾತನಾಡಿದ ಅವರು,ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ.ದೇವಾಲಯಗಳಿಗೆ ಬರುವ ಮನುಷ್ಯ ದೇವರ ಕಂಡು ನೆಮ್ಮದಿ ಪಡೆಯುತ್ತಾನೆ.ದೇವರ ಕಾರ್ಯಗಳಿಗೆ ನಾನು ಕೈಲಾದ ಮಟ್ಟಿಗೆ ಧನ ಸಹಾಯ ಮಾಡುತ್ತಿದ್ದೇನೆ ಎಂದರು‌.

ಈ ಸಂದರ್ಭದಲ್ಲಿ ಮಾಜಿ ಮನ್ಮುಲ್ ನಿರ್ದೇಶಕರಾದ ಬಿ.ಚಂದ್ರು, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರು ಬೋರೇಗೌಡ, ಬಿ.ಹೊಸೂರು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕುಮಾರ್ ಬಿ.ಕೆ, ಸುಮ, ದಿವ್ಯ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಬಿ.ಸಿ ವೆಂಕಟೇಶ್ ಕಾರ್ಯದರ್ಶಿಗಳಾದ ಗೋಪಾಲ್, ಯಜಮಾನರಾದ ಜಾನೇಗೌಡ, ಯುವ ಮುಖಂಡರು ಪ್ರತಾಪ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!