ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಕೊಲೆ, ಹಲ್ಲೆ ಸೇರಿದಂತೆ ಇನ್ನಿತರ ಘಟನೆಗಳು ವರದಿಯಾಗುತ್ತಿವೆ. ರಸ್ತೆಗಳಲ್ಲಿ ವ್ಹೀಲಿಂಗ್ ಹುಚ್ಚಾಟದಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದವರ ಜತೆಗೆ ಇದೀಗ ರಸ್ತೆಯಲ್ಲಿ ಕಾರು ಚಾಲಕ ಹಾರ್ನ್ ಮಾಡಿ ದಾರಿ ಕೇಳಿದ್ದಕ್ಕೆ ಕಾರು ಅಡ್ಡಗಟ್ಟಿ ಗಾಜು ಒಡೆದು ಹಾಕಿರುವ ಘಟನೆ ನಡೆದಿದೆ.
Four bikers #attack the occupants of a car in #Varthur (#Whitefield #police division) for #HONKING at them. They chase follow & thrash the car owner.
How to deal with such thugs?@NammaBengaluroo @WFRising @0RRCA @RisingVarthur @TOIBengaluru pic.twitter.com/UaaRTt9cdo
— Rakesh Prakash (@rakeshprakash1) July 13, 2023
“>
ಜುಲೈ 14ರಂದು ವರ್ತೂರು ಬಳಿ ಈ ಘಟನೆ ನಡೆದಿದೆ. ಮೂರರಿಂದ ನಾಲ್ಕು ಜನ ಬೈಕ್ ಸವಾರರು ಕಾರಿನ ಮುಂದೆ ಸಂಚಾರ ಮಾಡುವಾಗ ಕಾರು ಚಾಲಕ ದಾರಿ ಕೇಳಿದ್ದಾನೆ. ಇದಕ್ಕೆ ಕೋಪಗೊಂಡ ನಾಲ್ವರು ಬೈಕ್ ಸವಾರರು ಕಾರು ಚಲಿಸುವ ವೇಳೆ ಅಡ್ಡಾದಿಡ್ಡಿ ಬೈಕ್ ಚಲಾವಣೆ ಮಾಡಿದ್ದಾರೆ.
ಇದೇ ಸಮಯದಲ್ಲಿ ಕಾರಿನ ಗಾಜು ಒಡೆದು ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಅಲ್ಲದೇ ಕಾರಿಗೆ ಬೈಕ್ನಿಂದ ಡಿಕ್ಕಿ ಹೊಡೆದಿದ್ದಾರೆ. ಮುಂದುವರೆದು ಕಾರ್ ಫಾಲೋ ಮಾಡಿಕೊಂಡು ಹೋದ ಬೈಕ್ ಸವಾರರು ಗುಂಜೂರು ಗೇಟ್ನ ಅಪಾರ್ಟ್ಮೆಂಟ್ ಬಳಿ ಕಾರು ಚಾಲಕನೊಂದಿಗೆ ಗಲಾಟೆ ಮಾಡಿದ್ದಾರೆ. ಕಾರ್ ಮುಂದೆ ಬೈಕ್ ಅಡ್ಡಗಟ್ಟಿ ಕಾರಿನ ಕಿಟಿಕಿ ಒಡೆದು ಹಾಕಿದ್ದಾರೆ.