ಪಾಂಡವಪುರ ತಾಲ್ಲೂಕಿನ ಚಿನಕುರುಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಾಲೇಜಿನ 2022-23 ಶೈಕ್ಷಣಿಕ ಸಾಲಿನ ವಾರ್ಷಿಕ ಸಂಚಿಕೆ ‘ಚೈತನ್ಯ ಸಿರಿ’ಯನ್ನು ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಿ. ಎಸ್. ಪುಟ್ಟರಾಜು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಸದಸ್ಯ ಸಿ.ಎಸ್.ಗೋಪಾಲಗೌಡ, ಚಿನಕುರಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟಸ್ವಾಮಿ ಪಾಪಣ್ಣ, ಉಪಾಧ್ಯಕ್ಷೆ ಮಂಜುಳಾ ಮಹಾದೇವ್, ಗ್ರಾ.ಪಂ. ಸದಸ್ಯರಾದ ಸಿ ಎಸ್ ಶಿವಕುಮಾರ್, ಲೋಕೇಶ್, ಕೃಷ್ಣ, ಪಾಷಾ, ಕುಮಾರ್, ನಾಗೇಗೌಡ , ಗ್ರಾ.ಪಂ. ಮಾಜಿ ಸದಸ್ಯ ಮಹಾದೇವ್, ಸಿಡಿಪಿಯು ನಟರಾಜು, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆರತಿ ಕುಮಾರಿ, ಪ್ರಧಾನ ಸಂಪಾದಕ ಸಿ. ಎಸ್. ಮಂಜುನಾಥ್ ಚಿನಕುರಳಿ, ಸಂಪಾದಕ ಮಹೇಶ್, ಹಿರಿಯ ಉಪನ್ಯಾಸಕ ಕೆ.ವೈ. ಸುಬ್ಬನರಸಿಂಹ ಹಾಗೂ ಚಿನಕುರಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.