ನಾಗಮಂಗಲ ತಾಲ್ಲೂಕಿನ ಬಸರಾಳು ಗ್ರಾಮದ ಶ್ರೀನಿವಾಸ್ ಮತ್ತು ರಾಧಾ ದಂಪತಿಗಳಿಗೆ ಸೇರಿದ ಹಸು ಇತ್ತಿಚ್ಚೇಗೆ ಮೃತಪಟ್ಟಿದ್ದು, ಅವರಿಗೆ ಮಂಡ್ಯ ವಿಧಾನಸಭಾ ಜೆಡಿಎಸ್ ಮುಖಂಡ ಮಹಾಲಿಂಗೇಗೌಡ ಮುದ್ದನಗಟ್ಟ ಅವರು ಪರಿಹಾರದ ಚೆಕ್ ವಿತರಣೆ ಮಾಡಿದರು.
ಸುಮಾರು 80 ಸಾವಿರ ರೂ.ಬೆಲೆ ಬಾಳುವ ಹಸು ಆಕಸ್ಮಿಕವಾಗಿ ಮೃತಪಟ್ಟಿತ್ತು, ಈ ಕುಟುಂಬ ದಲಿತ ಸಮುದಾಯಕ್ಕೆ ಸೇರಿದ್ದು, ಕಡು ಬಡವರಾಗಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಮಹಾಲಿಂಗೇಗೌಡ ಅವರು, ಕುಟುಂಬಕ್ಕೆ ಸಾಂತ್ವನ ಹೇಳಿ, ತಮ್ಮತಾಯಮ್ಮ ರಾಮೇಗೌಡ ಚಾರಿಟೇಬಲ್ ಟ್ರಸ್ಟ್ ಮೂಲಕ ಆರ್ಥಿಕ ನೆರವು ನೀಡಿದರು.