ಇತ್ತೀಚೆಗೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಹಸುವಿನ ಮಾಲೀಕರಿಗೆ ಎನ್. ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ನ ಪೋಷಕ ಇಂಡುವಾಳು ಸಚ್ಚಿದಾನಂದ ಮಂಗಳವಾರ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.
ಶ್ರೀರಂಗಪಟ್ಟಣ ತಾಲೂಕಿನ ಬ್ರಹ್ಮಪುರ ಗ್ರಾಮದ ಲಕ್ಷ್ಮಮ್ಮ ಕೋಂ ಗಾರೆ ಸಿದ್ದಯ್ಯ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದ ಇಂಡುವಾಳು ಸಚ್ಚಿದಾನಂದ, ವೈಯಕ್ತಿಕ ಪರಿಹಾರ ವಿತರಿಸಿದರು. ಚೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದಲೂ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಅವರು ಹೇಳಿದರು.
ಈ ವೇಳೆ ತಾ.ಪಂ. ಮಾಜಿ ಅಧ್ಯಕ್ಷ ಟಿ. ಶ್ರೀಧರ್, ಮೇಳಾಪುರ ಪಿಎಸಿಎಸ್ ಮಾಜಿ ಅಧ್ಯಕ್ಷ ಎಂ.ಜೆ.ಪುಟ್ಟರಾಜು, ಟಿಎಪಿಸಿಎಂಎಸ್ ನಿರ್ದೇಶಕ ಶಿವಕುಮಾರ್, ಮೇಳಾಪುರ ಗ್ರಾ.ಪಂ. ಅಧ್ಯಕ್ಷ ಬೆಟ್ಟೇಗೌಡ, ಸದಸ್ಯ ಹೊಸೂರು ಧನರಾಜ್, ಮಹದೇವಪುರ ಶಶಿಕುಮಾರ್, ಮುಖಂಡರಾದ ನಗುವನಹಳ್ಳಿ ಮಹದೇವಸ್ವಾಮಿ, ವೆಂಕಟೇಶ್,
ಪ್ರದೀಪ್, ವಿರೂಪಾಕ್ಷ, ಸಚಿನ್, ಭರತ್, ನವೀನ್, ಚಂದನ್, ಬ್ರಹ್ಮಪುರ ಮಂಜುನಾಥ್, ಬೆಳವಾಡಿ ರಾಜೇಶ್ ಮತ್ತಿತರರಿದ್ದರು.