ಪ್ರಜಾಧ್ವನಿಯಾತ್ರೆಗಾಗಿ ಮಳವಳ್ಳಿ ಪಟ್ಟಣಕ್ಕೆ ಶನಿವಾರ ಸಂಜೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಪುಷ್ಪವೃಷ್ಠಿ ಮಾಡಿ, ಬೃಹತ್ ಗಾತ್ರದ ಹಾರಗಳನ್ನು ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡರು.
ಮಂಡ್ಯ ಜನರ ಪ್ರೀತಿ, ಅಭಿಮಾನ ಇಲ್ಲಿನ ಬೆಲ್ಲಕ್ಕಿಂತಲೂ ಸಿಹಿ. ಪ್ರಜಾಧ್ವನಿ ಯಾತ್ರೆ ಹಿನ್ನೆಲೆ ಇಂದು ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಭೇಟಿ ನೀಡಿದ ವೇಳೆ ಇಲ್ಲಿನ ಜನ ಸ್ವಾಗತಿಸಿದ ಪರಿ ಅದ್ಭುತ. ಜನರ ಈ ಪ್ರೀತಿ, ಬೆಂಬಲವೇ ನಮಗೆ ಶ್ರೀರಕ್ಷೆ.#KarnatakaWantsCongress#PrajaDhwaniYatra pic.twitter.com/Ts4O9OK2PA
— DK Shivakumar (@DKShivakumar) February 11, 2023
“>
ಇದಕ್ಕೂ ಮುನ್ನಾ ಹಲಗೂರಿನಿಂದ ಮಳವಳ್ಳಿ ಪಟ್ಟಣಕ್ಕೆ ಡಿಕೆ ಶಿವಕುಮಾರ್ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಜೈಕಾರ ಕೂಗಿ ಕಾರ್ಯಕರ್ತರು ಸ್ವಾಗತಿಸಿದರು. ಕ್ರೈನ್ ಮೂಲಕ ಹೂ,ಹಣ್ಣಿನ ಹಾರ ಹಾಕಿ ಸ್ವಾಗತಿಸಲಾಯಿತು.
ನರೇಂದ್ರಸ್ವಾಮಿ ಶಕ್ತಿ ಪ್ರದರ್ಶನ
ಮಳವಳ್ಳಿ ಪಟ್ಟಣದಲ್ಲಿ ಮಾಜಿ ಸಚಿವ ಪಿಎಂ ನರೇಂದ್ರ ಸ್ವಾಮಿ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಅಕ್ಷರಶಃ ಶಕ್ತಿ ಪ್ರದರ್ಶನ ಮಾಡಿದರು. ಮಳವಳ್ಳಿಗೆ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಬಸ್ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಅಪಾರ ಪ್ರಮಾಣದಲ್ಲಿ ಜಮಾಯಿಸಿ ನಾಯಕರನ್ನು ಬರ ಮಾಡಿಕೊಂಡರು. ಮಳವಳ್ಳಿ ಪಟ್ಟಣದಾದ್ಯಂತ ಎಲ್ಲೆಡೆ ಕಾಂಗ್ರೆಸ್ ಬಾವುಟವನ್ನಡಿದ ಕಾರ್ಯಕರ್ತರು ಬೃಹತ್ ಜನಸ್ತೋಮ ಕಂಡ ಬಂತು.