Friday, September 20, 2024

ಪ್ರಾಯೋಗಿಕ ಆವೃತ್ತಿ

ಧರ್ಮಸ್ಥಳ ಯಾತ್ರೆಗೆ ಬಿ.ಆರ್.ರಾಮಚಂದ್ರು ಚಾಲನೆ

ಮಂಡ್ಯ ನಗರದ ಕುವೆಂಪು ನಗರದಲ್ಲಿ ಶ್ರೀ ಶಂಭು ಸೇವಾ ಟ್ರಸ್ಟ್‌ ವತಿಯಿಂದ ಶ್ರೀ ಧರ್ಮಸ್ಥಳ ಯಾತ್ರೆಗೆ ಹೊರಟ 50ಕ್ಕೂ ಹೆಚ್ಚು ಜನರು ಪ್ರಯಾಣಕ್ಕೆ ಶ್ರೀ ಶಂಭು ಸೇವಾ ಟ್ರಸ್ಟ್‌ ಅಧ್ಯಕ್ಷ ಬಿ.ಆರ್.ರಾಮಚಂದ್ರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಶ್ರೀ ಶಂಭು ಧರ್ಮ ಯಾತ್ರೆಯ ಅಂಗವಾಗಿ ಧರ್ಮಸ್ಥಳ ದರ್ಶನಕ್ಕೆ ಕಳುಹಿಸಲಾಗಿದೆ, ಕೆಲಸ ಕಾರ್ಯಗಳು ಇದ್ದೇ ಇರುತ್ತವೆ, ಆತುರದಿಂದ ಹೋಗಿ ಬರುವುದು ಬೇಡ, ಸಮಾಧಾನವಾಗಿ ದೇವರ ದರ್ಶನ ಪಡೆದು ಬರಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಬಲಮುರಿ ದೇವಾಸ್ಥಾನದ ಅಭಿವೃದ್ಧಿಗೆ ಶಂಭು ಸೇವಾ ಟ್ರಸ್ಟ್‌ ವತಿಯಿಂದ 25 ಸಾವಿರ ರೂಪಾಯಿ ದೇಣಿಗೆ ನೀಡಲಾಯಿತು, ನಂತರ ಬಲಮುರಿ ದೇವಾಸ್ಥಾನದ ಆವರಣದಲ್ಲಿ ಯಾತ್ರಾರ್ಥಿಗಳು ಪೂಜೆ ಸಲ್ಲಿಸಿ ತೆರಳಿದರು.

ಟ್ರಸ್ಟ್‌ನ ಪದಾಧಿಕಾರಿ ಸುರೇಶ್, ಮುಖಂಡರಾದ ಶಿವಲಿಂಗೇಗೌಡ, ಹೇಮಂತ್‌, ಸ್ವಾಮಿ, ಬಿ.ಎಂ.ಅಪ್ಪಾಜಪ್ಪ, ಚೇತನ್ ಸೇರಿದಂತೆ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!