ಜಯನಗರದಲ್ಲಿ ನಟ ದರ್ಶನ್ ಲಾಂಗ್ ಪ್ರದರ್ಶನದ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿರುವ ಚಿತ್ರನಟಿ ಹಾಗೂ ಸಂಸದೆ ಸಮಲತಾ ಅಂಬರೀಶ್, ನಟ ದರ್ಶನ್ ಏನ್ ಮಾಡಿದ್ರು ಅದಕ್ಕೆ ಕಾಂಟ್ರೋವರ್ಸಿ ಕ್ರಿಯೇಟ್ ಮಾಡೋ ವರ್ಗಾ ಇದೆ ಎಂದಿದ್ದಾರೆ.
ದರ್ಶನ್ ಟಾರ್ಗೆಟ್ ಮಾಡಬೇಕು ಅನ್ನೋ ಒಂದು ವರ್ಗ ಇದೆ. ಇದರ ಬಗ್ಗೆ ದರ್ಶನ್ ಯಾವತ್ತು ತಲೆ ಕೆಡಿಸಿಕೊಂಡಿಲ್ಲ. ಇವತ್ತಿನ ವರಗೆ ಅವನ ಸಿನಿಮಾ, ಅವನ ಸಕ್ಸಸ್ ಗೆ ಯಾವುದೇ ತೊಂದರೆ ಆಗಿಲ್ಲ.
ಇವತ್ತಿಗೂ ಅವನ ಅಭಿಮಾನಿಗಳು ದರ್ಶನ್, ಡಿಬಾಸ್ ಅನ್ನೋ ಹುಚ್ವು ಅಭಿಮಾನ ಇದೆ. ಇಂತ ಅಭಿಮಾನಿಗಳು ಇರೋ ವರ್ಗೂ ಯಾವುದೇ ಕಾಂಟ್ರೋವರ್ಸಿಯಿಂದ ಏನು ಪ್ರಯೋಜನ ಆಗಲ್ಲ ಎಂದರು.
ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಅಭಿ ಸಾಕಷ್ಟು ಶ್ರಮ ಹಾಕಿದ್ದಾನೆ, ಅಂಬರೀಶ್ ಅವ್ರಿಗೆ ಸಿಕ್ಕ ಎಂಕ್ರೆಜ್ಮೆಂಟ್ ಅಭಿಗೂ ಅಭಿಮಾನಿಗಳು ಕೊಡ್ತಾರೆ ಅನ್ನೋ ವಿಶ್ವಾಸ ಇದೆ, ರಾಜಕಾರಣದಲ್ಲಿ ಅಭಿ ಅಥವಾ ನಾನು ಇರ್ತಿವಿ.
ಈ ಬಗ್ಗೆ ಹಿಂದೆಯೇ ಹೇಳಿಕೆ ನೀಡಿದ್ದೇನೆ, ಅಭಿಗೆ ಇನ್ನು ಟೈಮ್, ವಯಸ್ಸು ಇದೆ ಅವನಿನ್ನು ಸಾಕಷ್ಟು ಸಾಧನೆ ಮಾಡಬೇಕು, ಅವ್ನು ಈಗಷ್ಟೇ ಮದುವೆ ಆಗಿದ್ದಾನೆ ಇನ್ನು ಸಾಕಷ್ಟು ಸಿನಿಮಾ ಮಾಡಬೇಕಿದೆ. ಅವನ ಹಣೆ ಬರಹ ಏನ್ ಇದೆ ಅನ್ನೋದು ನನಗೆ ಗೊತ್ತಿಲ್ಲ. ಸದ್ಯಕ್ಕೆ ಅವ್ನಿಗೆ ಸಿನಿಮಾ ಮಾಡಿ ಒಳ್ಳೆ ಹೆಸ್ರು ಗಳಿಸಬೇಕು ಅನ್ನೋ ಆಸೆ ಇದೆ ಹೇಳಿದರು