ಮಂಡ್ಕ ನಗರ ಗುತ್ರಲು ಕಾಲೋನಿಯ ಕುವೆಂಪು ಶತಮಾನೋತ್ಸವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಹಯೋಗದಲ್ಲಿ ಮಧ್ಯಾಹ್ನದ ಬಿಸಿಯೂಟ ವಿತರಣೆಯಲ್ಲಿ 1ರಿಂದ 8ನೇ ತರಗತಿಯ ಮಕ್ಕಳಿಗೆ ಇಂದಿನಿಂದ ಮೊಟ್ಟೆ, ಬಾಳೆಹಣ್ಣು,ಕಡಲೆ ಮಿಠಾಯಿ ವಿತರಣೆಗೆ ಶಾಸಕರಾದ ಎಂ ಶ್ರೀನಿವಾಸ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಬಿಇಓ ಚಂದ್ರಕಾಂತ, ಸಹಾಯಕ ನಿರ್ದೇಶಕ ಗಿರೀಶ್, ಪರಿವೀಕ್ಷಕ ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಎಂ.ಸಿ, ಲೋಕೇಶ್,ಬಿಜೆಪಿ ಮುಖಂಡ ಚಾಮರಾಜು ಮತ್ತಿತರರಿದ್ದರು.