ಮಂಡ್ಯ ತಾಲ್ಲೂಕು ದುದ್ದ ಹೋಬಳಿ ಹೊನ್ನೇಮಡು ಗ್ರಾಮದಲ್ಲಿ ಶಂಭುಲಿಂಗೇಶ್ವರ ದೇವಾಲಯದ ಕಟ್ಟಡ ನಿರ್ಮಾಣಕ್ಕೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಜೆಡಿಎಸ್ ಮುಖಂಡ ಬಿ.ಆರ್ ರಾಮಚಂದ್ರ ಧನ ಸಹಾಯ ನೀಡಿದರು.
ದೇವಾಲಯಗಳು ನಮ್ಮ ಸಂಸ್ಕೃತಿಯ ಪತೀಕವಾಗಿವೆ, ಅವುಗಳನ್ನು ಸಂರಕ್ಷಿಸಿಕೊಳ್ಳಬೇಕಿದೆ, ಗ್ರಾಮಸ್ಥರು ಒಟ್ಟಿನಿಂದ ಶ್ರಮಿಸಿದರೆ ದೇವಾಲಯದ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳ್ಳಲಿದೆ, ನನ್ನ ಕೈಲಾದ ಮಟ್ಟಿಗೆ ದೇವಾಲಯಕ್ಕೆ ಸಹಾಯ ಮಾಡುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಚಲುವೀರೇಗೌಡ, ಅಂಗಡಿ ಅಶೋಕ್,
ಎಂಪಿಸಿಎಸ್ ಅಧ್ಯಕ್ಷರಾದ ಬಸವರಾಜು, ಯಾಜಮಾನ್ ಜಯರಾಮೇಗೌಡ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.