ಕೆ.ಆರ್.ಪೇಟೆ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಸ್ಟಾರ್ ಅತಿಥಿಯಾಗಿ ಉಗ್ರ ಹಿಂದುತ್ವದ ಪ್ರತಿಪಾದಕ, ಫೈರ್ ಬ್ರಾಂಡ್ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಬೇಕಿತ್ತು. ಆದರೆ ಅವರು ಕುಂಭಮೇಳಕ್ಕೆ ಗೈರು ಹಾಜರಾಗಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಕುಂಭಮೇಳಕ್ಕೆ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಲು ಸ್ವತಃ ಸಚಿವ ನಾರಾಯಣಗೌಡರೇ ಉತ್ತರಪ್ರದೇಶಕ್ಕೆ ಹೋಗಿ ಬಂದಿದ್ದರು. ಕುಂಭಮೇಳಕ್ಕೆ ಬರುವುದಾಗಿ ಯೋಗಿ ಆದಿತ್ಯನಾಥ್ ಕೂಡ ತಿಳಿಸಿದ್ದರು. ಯೋಗಿ ಆದಿತ್ಯನಾಥ್ ಆಗಮನದ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರವನ್ನು ಕೂಡ ಮಾಡಲಾಗಿತ್ತು.
ಆದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕುಂಭ ಮೇಳಕ್ಕೆ ಬರುತ್ತಿಲ್ಲವೆಂದು ವಿಶ್ವಾಸನೀಯ ಮೂಲಗಳಿಂದ ನುಡಿ ಕರ್ನಾಟಕ.ಕಾಂ ಗೆ ತಿಳಿದು ಬಂದಿದೆ. ಕುಂಭ ಮೇಳಕ್ಕೆ ಯೋಗಿ ಆದಿತ್ಯನಾಥ್ ಗೈರಾಗುವ ಸಂದೇಶದ ಬಗ್ಗೆ ಕಾರ್ಯಕ್ರಮದ ಸಂಘಟಕರನ್ನು ಸಂಪರ್ಕಿಸಲು ಪ್ರಯತ್ನಿಸಲಾಗಿ ಯಾರು ಸಹ ಸಂಪರ್ಕಕ್ಕೆ ಸಿಗಲಿಲ್ಲ.