Thursday, September 19, 2024

ಪ್ರಾಯೋಗಿಕ ಆವೃತ್ತಿ

ಉತ್ತಮ ಆರೋಗ್ಯ-ಶುದ್ಧ ನೀರು ಪೂರೈಸುವ ಅಭಿಲಾಷೆ : ಫೈಟರ್ ರವಿ

ಸಮಾಜ ಸೇವೆಯ ಜೊತೆಗೆ ಜನರಿಗೆ ಉತ್ತಮ ಆರೋಗ್ಯ ಮತ್ತು ಶುದ್ಧ ನೀರು ಪೂರೈಸುವ ಅಭಿಲಾಷೆ ಇದೆ ಎಂದು ಸಮಾಜ ಸೇವಕ
ಫೈಟರ್ ರವಿ ಹೇಳಿದರು.

ನಾಗಮಂಗಲ ತಾಲ್ಲೂಕಿನ ಕಾಚೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಮಾಜದ ವಿವಿಧ ಸಮಸ್ಯೆಗಳನ್ನು ಅರಿಯಲು ನಾಗಮಂಗಲ ತಾಲೂಕಿನ ಪ್ರತಿ ಗ್ರಾಮದಲ್ಲಿ ಜನರ ಮಧ್ಯೆ ಇದ್ದು, ಜನಸೇವೆ ಮಾಡುವ ಕನಸು ನನ್ನದಾಗಿದೆ. ಕನ್ನಡ ನಾಡು, ನುಡಿಯ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

ಕಾಚೇನಹಳ್ಳಿ ಗ್ರಾಮಕ್ಕೆ ಬರುವ ಮುನ್ನ ಫೈಟರ್ ರವಿ ಅವರನ್ನು ನಾಗಮಂಗಲದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ನಂತರ ಕಾಚೇನಹಳ್ಳಿ ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಸಿ.ಜೆ.ಕುಮಾರ್, ರಾಮಕೃಷ್ಣ, ಸುರೇಶ್ ಬೆಟ್ಟೆಗೌಡ ಹಾಗೂ ಗ್ರಾಮದ ಯುವಕರು, ಮುಖಂಡರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!