Wednesday, September 18, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಗುರುಪೂರ್ಣಿಮೆ ಆಚರಣೆ

ಕೆ.ಆರ್. ಪಟ್ಟಣದ ಬಿ.ಜಿ.ಎಸ್, ಶಿಕ್ಷಣ ಸಂಸ್ಥೆಯಿಂದ ಭಾನುವಾರ ಗುರು ಪೂರ್ಣಿಮೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಜಗದ್ಗುರು ಡಾ.ಬಾಲ ಗಂಗಾಧರನಾಥ ಮಹಾಸ್ವಾಮಿ, ಡಾ.ನಿರ್ಮಲಾನಂದ ಮಹಾಸ್ವಾಮಿಯವರ ಆಶೀರ್ವಾದದೊಂದಿಗೆ ಹಾಗೂ ಸಾರ್ಥಕ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರಾದ ಡಾ.ಜೆ.ಎನ್. ರಾಮಕೃಷ್ಣ ಗೌಡರ ಮಾರ್ಗದರ್ಶನದೊಂದಿಗೆ ಕಾರ್ಯಕ್ರಮ ನಡೆಯಿತು.

ಡಾ.ಶ್ರೀಬಾಲಗಂಗಾಧರನಾಥ ಸ್ವಾಮಿಗಳ ಪುತಳಿಗೆ ಪುಷ್ವಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತು. ಅತಿಥಿಗಳಿಗೆ ಗೌರವಗಳೊಂದಿಗೆ ವಿಶೇಷ ಸಿಹಿ ಹಂಚುವ ಮೂಲಕ ಗುರು ಪೂರ್ಣಿಮೆ ನಡೆಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ ಸಿ ನಾರಾಯಣ ಗೌಡ, ಮಾಜಿ ಶಾಸಕ ಕೆ ಬಿ ಚಂದ್ರಶೇಖರ್, ಮುಖಂಡರಾದ ಬಿ ನಂಜಪ್ಪ, ವಿಜಯ ಕುಮಾರ್, ಪಾಪೇಗೌಡ, ರೈತ ಮುಖಂಡ ಶಂಕರ್, ಪತ್ರಕರ್ತ ನೀಲಕಂಠ, ಹರಿಚರಣ್ ತಿಲಕ್, ಶಾಹಿ ಕುಮಾರ್, ರಂಗನಾಥ್, ಶಿಕ್ಷಕ ಎಂ ಎಸ್ ರಾಮಚಂದ್ರು ಹಾಗೂ ಬಿಜಿಎಸ್ ಶಾಲೆಯ ವಿದ್ಯಾರ್ಥಿಗಳು ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!