Wednesday, September 18, 2024

ಪ್ರಾಯೋಗಿಕ ಆವೃತ್ತಿ

ಹಳ್ಳಿಕಾರ್ ತಳಿಯ ಎತ್ತುಗಳ ಕದ್ದೊಯ್ದ ಕಳ್ಳರು

ಶ್ರೀರಂಗಪಟ್ಟಣ ತಾಲ್ಲೂಕಿನ ಚಂದಗಾಲು ಗ್ರಾಮದ ಪುರುಷೋತ್ತಮ್ ಎಂಬವರ ಹಳ್ಳಿಕಾರ್ ತಳಿಯ ಎತ್ತುಗಳನ್ನು ಕಳ್ಳರು ಸೋಮವಾರ ರಾತ್ರಿ‌ ಕದ್ದೊಯ್ದಿದ್ದಾರೆ.‌

ಮನೆಗೆ‌ ಹೊಂದಿ ಕೊಂಡಿರುವ ದನದ‌ ಕೊಟ್ಟಿಗೆಯ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಒಂದೂವರೆ ಲಕ್ಷ ರೂಪಾಯಿ ಬೆಲೆ ಬಾಳುವ ಹಳ್ಳಿಕಾರ್ ತಳಿಯ ಎತ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಮಧ್ಯ ರಾತ್ರಿ ಸುಮಾರು ರಾತ್ರಿ ಒಂದರಿಂದ ಮೂರು ಗಂಟೆಯ ಸಮಯದಲ್ಲಿ ಈ‌ ಕೃತ್ಯ ನಡೆದಿದೆ.

ಈ‌ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಗೆ ರೈತ ಪುರುಷೋತ್ತಮ್ ದೂರು‌ ನೀಡಿದ್ದು, ಎತ್ತುಗಳನ್ನು ಹುಡುಕಿಕೊಡುವಂತೆ‌ ಮನವಿ‌ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!