ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ 64ನೇ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ಮಾಜಿ ಶಾಸಕ ಡಾ.ಕೆ ಅನ್ನದಾನಿ ಮತ್ತು ಕಾರ್ಯಕರ್ತರಿಂದ ಶ್ರೀ ಗಂಗಾಧರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮಾಜಿ ಶಾಸಕ ಡಾ. ಕೆ ಅನ್ನದಾನಿ ಮಾತನಾಡಿ, ರಾಜ್ಯದ ಅಭಿವೃದ್ಧಿ, ರೈತರ ಕಲ್ಯಾಣ, ಜನಸಾಮಾನ್ಯರ ಸಂಕಷ್ಟಗಳಿಗೆ ಸದಾ ಮನಮಿಡಿಯುವ ಸಹೃದಯಿ ರಾಜಕಾರಣಿ ಹೆಚ್.ಡಿ.ಕುಮಾರಸ್ವಾಮಿ, ರೈತರ ಹಾಗೂ ಮಹಿಳೆಯರ ಅತಿ ಹೆಚ್ಚು ಕಾಳಜಿ ಉಳ್ಳ ನಾಯಕರಾಗಿದ್ದಾರೆ. ಅವರಿಗೆ ಭಗವಂತನು ಉತ್ತಮ ಆರೋಗ್ಯ ನೀಡಲಿ, ಮತ್ತೊಂದು ಬಾರಿ ಕರ್ನಾಟಕದ ಮುಖ್ಯಮಂತ್ರಿ ಆಗಲಿ ಎಂದು ಆಶಿಸಿದರು.
ಮಳವಳ್ಳಿ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುವನ್ನು ವಿತರಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ವಿಶ್ವನಾಥ್, ಪುರಸಭೆ ಸದಸ್ಯರಾದ ನಂದಕುಮಾರ್, ಪ್ರಶಾಂತ್, ಸಿದ್ದರಾಜು, ನೂರುಲ್ಲಾ, ನಾಗೇಶ್, ಮಣಿ, ನಾರಾಯಣ, ಮುಖಂಡರಾದ ಸದಾನಂದ, ಪುಟ್ಟಬುದ್ದಿ, ಮೆಹಬೂಬ್ ಪ್ರಭು, ಅಂಕನಾಥ, ಶಂಕರೇಗೌಡ ಪಾಲ್ಗೊಂಡಿದ್ದರು.