✍️ ಶಿವಸುಂದರ್
“ಹೊಗೆಬಾಂಬಿಗರು ”
ಭಗತ್ ಸಿಂಗನ ಅನುಯಾಯಿಗಳೇ?
ಸಿಕ್ಕಷ್ಟು ಉತ್ತರ
ಸ್ಪಷ್ಟವಾಗಿದೆ…
ಕ್ಷಮಾಪಣೆ ಕೇಳಿಲ್ಲ..
ಒಡನಾಡಿಗಳಿಗೆ
ದ್ರೋಹ ಬಗೆದಿಲ್ಲ..
ಸುದೀರ್ಘ ಜೈಲು ಪ್ರಯಾಣಕೆ
ಹಿಂಜರಿದಿಲ್ಲ….
ವರ್ಮಾ, ಶರ್ಮ, ಗೌಡ, ಶಿಂದೆ
ಒಂದಾಗಿದ್ದು ಹಿಂದುಗಳಾಗಿಯಲ್ಲ..
ಬಡ ಭಾರತೀಯರೆಲ್ಲ
ಭಗತ್ ಸಿಂಗನ
ಬಲ ಭೀಮನ
ಒಕ್ಕಲು ಎಂದು ಕೂಗಿದ್ದಾರಲ್ಲ!
ಒಂದಂತೂ ಖಚಿತ …
ಸಾವರ್ಕರ್,
ಸಂಘಿಗಳಂತೂ
ಆಗಿರಲಿಕ್ಕಿಲ್ಲ
ಒಂದೆರೆಡು
ಪ್ರಶ್ನೆ ಉಳಿದಿರಬಹುದಿನ್ನೂ…
ಅದೇನೇ ಇರಲಿ, ಈಗ ಕೇಳಬೇಕಿರುವುದು
ಅಸಲಿ ಪ್ರಶ್ನೆ ಯನ್ನು…
ಇರಬಹುದು
ಹೊಗೆ ಬಾಂಬಿಗರು
ಭಗತ್ ಸಿಂಗನ ವಾರಸರು
ಆದರೆ
ಅಧಿಕಾರದಲ್ಲಿರುವವರು
ಬ್ರಿಟಿಷರ ವಾರಸುದಾರರೇ ?…
ಈ ಬಗ್ಗೆ ಯಾರಿಗಾದರೂ
ಇನ್ನೂ ಅನುಮಾನ
ಉಳಿದಿದೆಯೇನು ?
ಬ್ರಿಟಿಷ್ ಭಾರತದ
ಕಿವಿ ತೆರೆಸಿದ್ದಂತೂ ನಿಜ
ಭಗತ್ ಸಿಂಗನ
ಅಹಿಂಸಾತ್ಮಕ ಬಾಂಬು
ಆದರೆ..
ಭಕ್ತ ಭಾರತದ
ಜಾಣಕಿವುಡನ್ನು
ತೆರಿಸಿದಂತೆ ಕಾಣೆ
ಹತಾಶ ಭಾರತದ
ಹೊಗೆ ಬಾಂಬು