Thursday, September 19, 2024

ಪ್ರಾಯೋಗಿಕ ಆವೃತ್ತಿ

ಮನೆ ಕಳ್ಳತನ: ಆರೋಪಿ ಬಂಧನ

ಮಂಡ್ಯ ನಗರದ ಹಲವೆಡೆ ಮನೆ ಕಳ್ಳತನ‌ ಮಾಡಿ ನಗದು, ಚಿನ್ನ,ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಮಂಡ್ಯದ ಪೂರ್ವ ಠಾಣೆಯ ಪೋಲಿಸರು ಬಂಧಿಸಿದ್ದಾರೆ. ಮಂಡ್ಯದ ಆಜಾದ್ ನಗರದ ಅಮೀನ್ ಹುಸೇನ್ ಅಲಿಯಾಸ್ ಸದ್ದಾಂ ಬಂಧಿತ ಆರೋಪಿ.

23-09-2022 ರಂದು ರಾತ್ರಿ ಸಮಯದಲ್ಲಿ ಮಂಡ್ಯ, ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಚಲುವಯ್ಯ ಪಾರ್ಕ್ ರಸ್ತೆಯಲ್ಲಿ ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯವರಾದ ಶ್ರೀ ಮಂಜುನಾಥ ಮತ್ತು ಶ್ರೀ ಅನಿಲ್ ಕುಮಾರ್ ಅವರು ಗಸ್ತಿನಲ್ಲಿರುವಾಗ, ಮಂಡ್ಯ ಆಜಾದ್ ನಗರದಲ್ಲಿ ಎಂ.ಓ.ಬಿ ಆಸಾಮಿಯು ಸಿಬ್ಬಂದಿಗಳನ್ನು ನೋಡಿ ಅನುಮಾನಾಸ್ಪದವಾಗಿ ಓಡಲು ಪ್ರಯತ್ನಿಸಿದವನನ್ನು ಕರೆ ತಂದು ವಿಚಾರಣೆ ಮಾಡಿದ ಸಂದರ್ಭದಲ್ಲಿ ಆತ ನಗರದ ಹಲವೆಡೆ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಹಿಂದೆ ಆಗಸ್ಟ್ ತಿಂಗಳಲ್ಲಿ ಮಂಡ್ಯ ಸಿಟಿಯ ಅರಕೇಶ್ವರ ನಗರದ ಮಂಜುನಾಥ್ ಎಂಬುವವರ ಮನೆಯಲ್ಲಿ, ಸ್ವರ್ಣಸಂದ್ರದ ವಿನೋದ , ಅಶೋಕನಗರದ ಜೈನ್ಸ್ ಕಾಲೋನಿಯ ಕೃಷ್ಣಪ್ಪ ಹಾಗೂ ಕಲ್ಲಹಳ್ಳಿಯ ವಿ.ವಿ.ನಗರದ ನಾಗರಾಜು ಎಂಬುವವರ ಮನೆಯ ಬಾಗಿಲನ್ನು ಮುರಿದು ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ್ದರು.

ಆರೋಪಿಯಿಂದ ಒಟ್ಟು 55.425 ಗ್ರಾಂ ಚಿನ್ನಾಭರಣಗಳು, 2.300 ಗ್ರಾಂ ಮೂಲ್ಯದ ಚಿನ್ನಭರಣಗಳನ್ನು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 3,15,000 ಲಕ್ಷ ರೂ. ಆಗಿರುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!