ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಐರಾ ನ್ಯಾಷನಲ್ ಪಾರ್ಟಿಯು ಎಲ್ಲಾ 224 ಕ್ಷೇತ್ರಗಳನ್ನು ಸ್ಪರ್ಧೆ ಮಾಡಲಿದ್ದು, ವಿಶೇಷವಾಗಿ ಮಹಿಳೆಯರಿಗೆ ಶೇ.50 ಸ್ಥಾನಗಳನ್ನು ನೀಡಲಾಗುವುದೆಂದು ಪಕ್ಷದ ರಾಜ್ಯಾಧ್ಯಕ್ಷ ಡಾ. ಸಾಯಿ ಸತೀಶ್ ತೋಟಯ್ಯ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರುಷರಿಗೆ ಶೇ.30, ವಿಕಲ ಚೇತನರಿಗೆ ಶೇ.10 ಹಾಗೂ ಮಂಗಳಮುಖಿಯರಿಗೆ ಶೇ.10 ಸೀಟುಗಳನ್ನು ಹಂಚಿಕೆ ಮಾಡಲಾಗುವುದು. ಎಲ್ಲರಿಗೂ ಆಹಾರ, ಬಟ್ಟೆ ಮತ್ತು ವಸತಿಯ ಬಗ್ಗೆ ಪ್ರಾಮುಖ್ಯತೆ, ಪ್ರತಿ ಮಹಿಳೆಯರಿಗೆ ಆರ್ಥಿಕ ಭದ್ರತೆ, ಪ್ರತಿಯೊಬ್ಬರ ಕೈಗೂ ಉದ್ಯೋಗ, ಪ್ರತಿಯೊಂದು ಕ್ಷೇತ್ರದಲ್ಲೂ ನೀರು ಮತ್ತು ವಿದ್ಯುತ್, ಸ್ವಾತಂತ್ರ್ಯ ಭದ್ರತೆ ಭರವಸೆ, ಶಿಕ್ಷಣ ಮತ್ತು ಆರೋಗ್ಯಕ್ಕೆ ಆದ್ಯತೆ, ಅರ್ಥಿಕವಾಗಿ ದುರ್ಬಲ ಹೆಣ್ಣು ಮಕ್ಕಳ ಮದುವೆಗೆ 1 ಲಕ್ಷ ರೂ. ಅನುದಾನ ನೀಡಲಾಗುವುದು ಎಂದರು.
ಪ್ರತಿಕುಟುಂಬಕ್ಕೆ ಒಂದು ಮನೆ, ಒಂದು ಕೆಲಸ ಕಡ್ಡಾಯ, ಶಿಕ್ಷಣ, ಆರೋಗ್ಯ, ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳಿಗೆ ಪರಿಹಾರ, ನಗರದಿಂದ ಗ್ರಾಮಕ್ಕೆ ಸಾರಿಗೆ, ಪ್ರತಿ ವಸ್ತುಗಳ ಮೇಲೆ ಕನಿಷ್ಠ ಬೆಲೆ ಖಾತರಿ, ಕಾಯ್ದಿರಿಸಿದ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದೆಂದರು.
ಗೋಷ್ಠಿಯಲ್ಲಿ ಡಾ.ಜಯಶಂಕರ್, ವಿರೇಂದ್ರಬಾಬು, ಕೇಶವಾನಂದ ಉಪಸ್ಥಿತರಿದ್ದರು.