Thursday, September 19, 2024

ಪ್ರಾಯೋಗಿಕ ಆವೃತ್ತಿ

ಆರ್ಥಿಕ ನೆರವು ನೀಡಿದ ಕದಲೂರು ಉದಯ್

ಮದ್ದೂರು ತಾಲ್ಲೂಕಿನ ಭಾರತೀನಗರದ ಮಾದರಹಳ್ಳಿ, ಲಕ್ಷ್ಮೇಗೌಡನದೊಡ್ಡಿಗೆ ಭೇಟಿ ನೀಡಿದ ಸಮಾಜ ಸೇವಕ ಕದಲೂರು ಉದಯ್ ಅವರು ಇತ್ತೀಚೆಗಷ್ಟೇ
ಗ್ಯಾಂಗ್ರಿನ್ನಿಂದ ಕಾಲು ಕಳೆದುಕೊಂಡಿದ್ದ ಯೋಗಿರಾಜು ಮತ್ತು ನಿಧನರಾದ ಸಚಿನ್ ಹಾಗೂ ಅಪಘಾತದಿಂದ ಕಾಲು ಕಳೆದುಕೊಂಡ ಕುಳ್ಳೇಗೌಡರ ಮನೆಗೆ ಭೇಟಿ ನೀಡಿ ಆರ್ಥಿಕ ನೆರವು ನೀಡಿದರು.

ನಂತರ ಮಾತನಾಡಿದ ಅವರು, ನಾನು ಯಾವುದೇ ರಾಜಕೀಯ ಉದ್ದೇಶ ಇಟ್ಟುಕೊಂಡಿಲ್ಲ. ನೊಂದವರಿಗೆ ಸಹಾಯ ಹಸ್ತ ನೀಡಬೇಕು. ನಾನು ಕೊಡುವ ಹಣ ಅವರಿಗೆ ಸಹಾಯವಾಗಬೇಕು.ಆದ್ದರಿಂದಲೇ ಉದಯ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ಕಷ್ಟ ಎಂದವರಿಗೆ ಸಹಾಯ ಹಸ್ತ ನೀಡುತ್ತ ಬಂದಿದ್ದೇನೆ ಎಂದರು.

ನೊಂದವರಿಗೆ ಉದಯ್ ಚಾರಿಟಬಲ್ ಟ್ರಸ್ಟ್ ಬಾಗಿಲು ಎಂದಿಗೂ ತೆರೆದಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಕದಲೂರು ತಿಮ್ಮೇಗೌಡ,ಕದಲೂರು ರವಿ,ಗ್ರಾಮ ಪಂಚಾಯತಿ ಅಧ್ಯಕ್ಷ ಮಧು ,ಯತೀಶ್ ಬಾಬು ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!