ಕರ್ನಾಟಕ ಜನಶಕ್ತಿಯ ದಶಮಾನೋತ್ಸವ ಜಿಲ್ಲಾ ಸಮ್ಮೇಳನದ ಅಂಗವಾಗಿ ಕಾರ್ಮಿಕರಿಗೆ ಕರಪತ್ರ ನೀಡಿ ಆಹ್ವಾನಿಸಲಾಯಿತು.
ಮಂಡ್ಯದ ಕೆಎಸ್ ಬಿಸಿಎಲ್ ಗೋದಾಮು, ಅಕ್ಕಿ ಗೋದಾಮು ಹೀಗೆ ನಾನಾ ಕಡೆ ಅನೇಕ ಕಾರ್ಮಿಕರಿಗೆ ಕರ್ನಾಟಕ ಜನಶಕ್ತಿ ಸಂಘಟನೆಯ ಹೋರಾಟದ ಹಾದಿಯ ಬಗ್ಗೆ ವಿವರಿಸಿದರು.
25ರಂದು ಮಂಡ್ಯದ ಕರ್ನಾಟಕ ಸಂಘದ ಆವರಣದಲ್ಲಿ ನಡೆಯುವ ಜಿಲ್ಲಾ ಸಮ್ಮೇಳನ ನಡೆಸಲಿದ್ದು, ಸಂಘದ ಸದಸ್ಯರಾದ ಎಲ್ಲರೂ ಪಾಲ್ಗೊಳಬೇಕು ಎಂದು ಕಾರ್ಯಕರ್ತರು ಮನವಿ ಮಾಡಿದರು.
ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು,
ಕರ್ನಾಟಕ ಶ್ರಮಿಕ ಶಕ್ತಿಯ ಅಧ್ಯಕ್ಷರಾದ ವರದರಾಜು, ಮಹಿಳಾ ಮುನ್ನಡೆಯ ಪೂರ್ಣಿಮಾ, ಶಿಲ್ಪ ಇನ್ನೂ ಅನೇಕರು ಇದ್ದರು.