ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗ, ಪರಿಚಯ ಪ್ರಕಾಶನ ಮಂಡ್ಯ – ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಇವರ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಂಡ್ಯದ ಗಾಂಧಿನಗರ 4ನೇ ಕ್ರಾಸ್ ನ ಕನ್ನಿಕಶಿಲ್ಪ ನವೋದಯ ತರಬೇತಿ ಕೇಂದ್ರದಲ್ಲಿ ಮಾ.25ರಂದು ಮಧ್ಯಾಹ್ನ 2.30ಗಂಟೆಗೆ ಮಹಿಳಾ ಕವಿಗೋಷ್ಠಿ ನಡೆಯಲಿದೆ.
ಕವಯತ್ರಿ ಸುಚಿತ್ರಾ ಹೆಗಡೆ ಕಾರ್ಯಕ್ರಮ ಉದ್ಘಾಟಿಸುವರು. ಸಾಹಿತಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಯುವ ಬರಹಗಾರರ ಬಳಗ ಅಧ್ಯಕ್ಷ ಬಿ.ಸತೀಶ್ ಜವರೇಗೌಡ ಆಶಯ ನುಡಿ ನುಡಿಯುವರು. ಸಿ.ಐ.ಟಿ.ಯು ಪ್ರಧಾನ ಕಾರ್ಯದರ್ಶಿ ಸಿ. ಕುಮಾರಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಕವಯತ್ರಿಯರಾದ ಡಾ.ಶುಭಶ್ರೀ ಪ್ರಸಾದ್, ಡಾ.ಪಿ.ಎನ್.ಗೀತಾಮಣಿ, ಕೆ.ಪಿ. ಪದ್ಮ ಮಂಡ್ಯ, ಆಶಾ ಹನಿಯಂಬಾಡಿ, ಕೆ.ಎಸ್. ಮಾಲ, ವಿದ್ಯಾ ಕೆ.ಆರ್. ಪೇಟೆ, ಸುಮನ್ ರಾವ್, ಗೀತಾ ಅನಂತನಾಗ್, ಅನಿತಾ ಚೇತನ್ ಬಾರ್ಗಲ್, ಎಂ.ಎಸ್. ಆಶಾಲತಾ, ಡಾ.ಪಿ. ಸುಮಾರಾಣಿ, ಭವಾನಿ ಲೋಕೇಶ್, ಸುಶ್ಮಿತಾ ಬೆಟ್ಟಹಳ್ಳಿ, ಶಿಖರ ಶೋಭಿತ, ಎಂ.ಆರ್ ಪ್ರಮೋದ ಮಣಿ, ಕವಿತಾ ಪಟೇಲ್, ಕೆ.ಶಬಾನ ಮಂಡ್ಯ, ಅಭಿಜ್ಞಾ ಪಿ.ಎಂ.ಗೌಡ, ಆರ್.ಎಂ.ಸಹನ, ಕವಿತಾ ಪಟೇಲ್, ಶಿಲ್ಪ, ಗೀತಾ ಲೋಕೇಶ್, ದಿವ್ಯ ಮಂಗಲ, ಶರ್ಮಿಳಾ ಎ. ಅಪ್ಪಾಜಿ, ಎಂ. ಶ್ವೇತ ದಂಬದಹಳ್ಳಿ, ಎಂ.ಎನ್. ಮಮತಾ ಮಳವಳ್ಳಿ ಹಾಗೂ ಎಸ್.ಸಿ. ಭಾವನಿ ಕವಿತೆ ವಾಚನ ಮಾಡುವರು.