ಮಂಡ್ಯ ನಗರದ ಕಾಳಿಕಾಂಬ ದೇವಾಲಯದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಎಚ್.ಎನ್.ಯೋಗೇಶ್ ಆಯೋಜಿಸಿದ್ದ ಎಂ.ಶ್ರೀನಿವಾಸ್ ಧರ್ಮಸ್ಥಳ 5ನೇ ಯಾತ್ರೆ ಅಭಿಯಾನಕ್ಕೆ ಯುವ ಮುಖಂಡ ಎಚ್.ಎನ್.ಯೋಗೇಶ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಮತ್ತು ನಗರದ ಜನತೆ ದಿನ ನಿತ್ಯದ ಕೆಲಸ ಕಾರ್ಯದ ಒತ್ತಡದಲ್ಲಿ ಸಾಧ್ಯವಾದಷ್ಟು ಧಾರ್ಮಿಕ ಪುಣ್ಯಕ್ಷೇತ್ರಗಳನ್ನು ನೋಡಲು ಸಾಧ್ಯವಾಗಿರಲ್ಲ, ಅಂತಹ ಜನತೆಗೆ ಎಂ.ಶ್ರೀನಿವಾಸ್ ಧರ್ಮಸ್ಥಳ ಯಾತ್ರೆ ಅಭಿಯಾನ ಆಯೋಜಿಸಿ ಎಲ್ಲಾ ಸೌಲಭ್ಯಗಳನ್ನು ಒದಲಾಗಿಸಲಾಗಿದೆ ಎಂದರು.
ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಗಣಪತಿ ದೇವಾಲಯ ವೀಕ್ಷಿಸಿ 2 ದಿನಗಳಲ್ಲಿ ಸ್ವಗ್ರಾಮಕ್ಕೆ ಕ್ಷೇಮವಾಗಿ ತಲುಪುವ ವಾಹನ ವ್ಯವಸ್ಥೆ, ಊಟೋಪಾಚಾರ, ಔಷದೋಪಾಚರದೊಂದಿಗೆ ಯಾತ್ರೆ ಸುಖಕರವಾಗಿರಲೆಂದು ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ನಾಗೇಶ್, ಮುಖಂಡರಾದ ಪುಟ್ಟಸ್ವಾಮಿ, ಶಶಿಕುಮಾರ್ ಮತ್ತಿತರರಿದ್ದರು.