ಮಳವಳ್ಳಿ ಯುವಕ ಮಿತ್ರರು ಪಟ್ಟಣದಲ್ಲಿ ಓಡಾಡುತ್ತಿದ್ದ ಇಬ್ಬರು ಮಾನಸಿಕ ಅಸ್ವಸ್ಥರನ್ನು ಶುಚಿಗೊಳಿಸಿ ಹೊಸ ಉಡುಪನ್ನು ಧರಿಸಿ ಮಾನವೀಯತೆ ಮೆರೆದರು.
ಹಲವು ದಿನಗಳಿಂದ ಪಟ್ಟಣದಲ್ಲಿ ಶುಚಿತ್ವ ಇಲ್ಲದೆ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಅವರನ್ನು ಇಂದು ಶುಚಿಗೊಳಿಸಿ ಹೊಸ ಉಡುಪನ್ನು ಧರಿಸಿ ಸಮಾಜಕ್ಕೆ ಮಾದರಿ ಸಂದೇಶವನ್ನು ಸಾರಿದರು. ಈ ಕಾರ್ಯವನ್ನು ಗಮನಿಸಿದ ಸಾರ್ವಜನಿಕರು ಯುವಕ ಮಿತ್ರರ ತಂಡಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಪೊಲೀಸ್ ಪ್ರಭು, ಸಮಾಜ ಸೇವಕ ತಳಗವಾದಿ ಪ್ರಕಾಶ್, ಪೇಟೆ ಬೀದಿ ನಾಗರಾಜು, ಸಿದ್ದೇಶ್, ಸಿದ್ದಾರ್ಥ, ನಾಗರಾಜು, ಅವಿ ಸೇರಿದಂತೆ ಇತರರು ಇದ್ದರು.