Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಿ.ಎಸ್. ಪುಟ್ಟರಾಜುಗೆ ಫ್ರೀ ಪಬ್ಲಿಸಿಟಿ ಕೊಡಲ್ಲ : ಸಂಸದೆ ಸುಮಲತಾ

ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಫ್ರೀ ಪಬ್ಲಿಸಿಟಿ ಕೊಡುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಮಂಡ್ಯ ನಗರದ ಮಹಾವೀರ ಸರ್ಕಲ್ ನ ರೈಲ್ವೆ ಗೇಟ್ ಬಳಿ ಸೇತುವೆ ನಿರ್ಮಾಣದ ಸಂಬಂಧ ಇಂದು ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಚುನಾವಣೆ ಬರುತ್ತಿದೆ, ಹಾಗಾಗಿ ಅವರಿಗೆ ನನ್ನಿಂದ ಪುಕ್ಕಟ್ಟೆ ಪ್ರಚಾರ ಬೇಕಾಗಿದೆ, ಹಾಗಾಗಿ ನನ್ನನ್ನು ಟೀಕೆ ಮಾಡುತ್ತಿದ್ದಾರೆ, ಅವರು ಏನು ಬೇಕಾದ್ರು ಮಾತನಾಡಿಕೊಳ್ಳಿ ನಾನು ರಿಪ್ಲೆ ಮಾಡಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ಮಂಡ್ಯ ಮಹಾವೀರ ವೃತ್ತದಿಂದ ಪೇಟೆ ಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸೇತುಗೆ ನಿರ್ಮಿಸುವಂತೆ ಈ ಭಾಗದ ವರ್ತಕರಿಂದ ಬೇಡಿಕೆ ಇದೆ, ಈ ಜಾಗದಲ್ಲಿ ಸಂಪರ್ಕ ರಸ್ತೆಗೆ ಅಡ್ಡಲಾಗಿರುವ ರೈಲ್ವೆ ಹಳಿಗಳಿವೆ, ಅಲ್ಲದೇ ಪ್ರತಿನಿತ್ಯ ಸಾವಿರಾರು ಜನರು ಸಂಚಾರ ಮಾಡುವುದರಿಂದ ರೈಲ್ವೇ ಗೇಟ್ ಹಾಕಿದಾಗ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ರೈಲ್ವೇ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರ ಜೊತೆ ಚರ್ಚೆ ಮಾಡಿದ್ದೆ, ಈ ಬೇಡಿಕೆಯು ಬಹಳ ವರ್ಷಗಳಿಂದ ಇದೆ, ಇಲ್ಲಿ ಸೇತುವೆ ನಿರ್ಮಾಣಕ್ಕಿರುವ ಅಡಚಣೆಗಳನ್ನು ನಿವಾರಣೆ ಮಾಡುವುದಕ್ಕಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಈ ವೇಳೆ ತಹಶೀಲ್ದಾರ್ ಕುಂಇ್ ಅಹಮದ್, ರೈಲ್ವೆ ಇಂಜಿನಿಯರ್ ಪ್ರಭು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!