Thursday, September 19, 2024

ಪ್ರಾಯೋಗಿಕ ಆವೃತ್ತಿ

ಎಲ್ಲಾ ಸಮುದಾಯದ ಉದ್ಧಾರಕ್ಕೆ ಪಂಚರತ್ನ ಯೋಜನೆ : ಕಲ್ಪನಾ ರಾಮಚಂದ್ರು

ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿರವರು ಬಡವರು,ರೈತರು, ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಜನರ ಹಿತಕ್ಕಾಗಿ ರೂಪಿಸಿರುವ ಪಂಚರತ್ನ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದು,ಅದಕ್ಕಾಗಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಬೇಕೆಂದು ಮನ್ಮುಲ್ ನಿರ್ದೇಶಕ ಬಿ.ಆರ್ ರಾಮಚಂದ್ರರವರ ಧರ್ಮ ಪತ್ನಿ ಕಲ್ಪನಾ ರಾಮಚಂದ್ರು ಮನವಿ ಮಾಡಿದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಹನಗನಹಳ್ಳಿ, ಕಾಲೋನಿ, ಎಂ.ಹಟ್ನ, ಬುಂಡಾರೆಕೊಪ್ಪಲು ಹಾಗೂ ಸಾತನೂರು ಗ್ರಾಮಗಳಿಗೆ ಭೇಟಿ ನೀಡಿ ಜೆಡಿಎಸ್ ಕಾರ್ಯಕರ್ತರೊಡನೆ ಪಂಚರತ್ನ ಯೋಜನೆಯ ಬಗ್ಗೆ ಕರಪತ್ರ ನೀಡಿ ಸವಿವರವಾಗಿ ಜನರಿಗೆ ವಿವರಿಸಿದರು.

ಜನರಿಗೆ ಆರೋಗ್ಯ, ಶಿಕ್ಷಣ, ಕೃಷಿ,ಉದ್ಯೋಗ,ರೈತರ ಸಾಲ ಮನ್ನಾಗೆ ಕುಮಾರಸ್ವಾಮಿ ಅವರು ನಿರ್ಧರಿಸಿದ್ದು, ಜೆಡಿಎಸ್ ಪಕ್ಷ ಕ್ಕೆ ಜನರು ಆಶೀರ್ವದಿಸಬೇಕೆಂದು ಕೋರಿದರು.

ಜೆಡಿಎಸ್ ಮುಖಂಡ ಬಿ.ಆರ್.ಸುರೇಶ್ ಮಾತನಾಡಿ, ಈ ರಾಜ್ಯದ ರೈತರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಜೆಡಿಎಸ್ ಪಕ್ಷವೇ ಆಸರೆಯಾಗಿದೆ.ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ನೂರಾರು ಜನೋಪಯೋಗಿ ಕಾರ್ಯಕ್ರಮಗಳನ್ನು ನೀಡಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ಪುಟ್ಟಸ್ವಾಮಿ, ಶಂಭು, ಮಂಜು, ನಾಗರಾಜು, ಕಾಳೇಗೌಡ, ಜಯಶಂಕರ, ರಾಜಣ್ಣ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!