ಮಂಡ್ಯ ತಾಲೂಕಿನ ಕಸಬಾ ಹೋಬಳಿಯ ಕೊಮ್ಮೇರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್.ಪಿ.ಕೃಷ್ಣಮೂರ್ತಿ ಅವಿರೋಧ ಆಯ್ಕೆಯಾದರು.
ಈ ಹಿಂದಿನ ಅಧ್ಯಕ್ಷ ಹೆಚ್.ಪುಟ್ಟಸ್ವಾಮಿ ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. 9 ಮಂದಿ ಸದಸ್ಯ ಬಲವುಳ್ಳ ಸೊಸೈಟಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಪಿ.ಕೃಷ್ಣಮೂರ್ತಿ ಹೊರತುಪಡಿಸಿ, ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಸೊಸೈಟಿ ಅಧ್ಯಕ್ಷರಾಗಿ ಹೆಚ್.ಪಿ.ಕೃಷ್ಣಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಮುಕ್ತಾ ಘೋಷಿಸಿದರು.
ನೂತನ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಸಹಕಾರ ಸಂಘಗಳು ಗ್ರಾಮೀಣ ಪ್ರದೇಶಗಳ ರೈತರ ಕೃಷಿ ಕಾರ್ಮಿಕರ, ಬಡ ಕುಟುಂಬಗಳಿಗೆ ಆರ್ಥಿಕ ನೆರವು, ಪಡಿತರ, ಕೃಷಿ ಪರಿಕರಗಳನ್ನು ಹಾಗೂ ಸರ್ಕಾರದಿಂದ ರೈತರಿಗೆ ದೊರೆಯುವ ಸೌಲಭ್ಯಗಳನ್ನು ತಲುಪಿಸುತ್ತಿದ್ದು ಇವುಗಳನ್ನು ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಹೊನಗಾನಹಳ್ಳಿ ಹಾಗೂ ಕೊಮ್ಮೇರಹಳ್ಳಿ ಗ್ರಾಮಸ್ಥರಿಗೆ ಸಕಾಲಕ್ಕೆ ತಲುಪಿಸಿ ರೈತಾಪಿ ವರ್ಗಕ್ಕೆ ಅನುಕೂಲ ಮಾಡಿಕೊಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೊಮ್ಮೇರಹಳ್ಳಿ ಸೊಸೈಟಿ ಉಪಾಧ್ಯಕ್ಷ ಕೆ.ಶಿವಲಿಂಗಯ್ಯ, ನಿರ್ದೇಶಕರಾದ ಚಿಕ್ಕಗವಿಯ, ಬಸವರಾಜು, ಗಿರಿಯ, ಪುಟ್ಟಸ್ವಾಮಿ, ದೊಡ್ಡಲಿಂಗಮ್ಮ, ಲಲಿತಮ್ಮ, ಮಲ್ಲೇಶ್, ಸೇರಿದಂತೆ ಹೊನಗಾನಹಳ್ಳಿ ಹಾಗೂ ಕೊಮ್ಮೇರಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.