ಮಂಡ್ಯ ನಗರದ ಸ್ಟೇಡಿಯಂ ಸಮೀಪದ ಸಾವಯವ ಕೃಷಿ ಮಾರಾಟ ಮಳಿಗೆ ಆವರಣದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯ 2023 ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಕೃಷಿಕ್ ಲಯನ್ಸ್ ಸಂಸ್ಥೆ ಆಡಳಿತ ಅಧಿಕಾರಿ ಕೆ ಟಿ ಹನುಮಂತು, ಅಧ್ಯಕ್ಷ ಮೋಹನ್ ಕುಮಾರ್, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಜಿ ವಿ ನಾಗರಾಜ್, ಮನ್ಮುಲ್ ನಾಮಿನಿ ನಿರ್ದೇಶಕಿ ಸುಜಾತ ಕೃಷ್ಣ, ಸಾವಯವ ಕೃಷಿ ಮಾರ್ಗದರ್ಶಕ ಅನಂತ ರಾವ್ ಮತ್ತಿತರರು ಉಪಸ್ಥಿತರಿದ್ದರು.