Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಹುಲ್ ಗಾಂಧಿ ಮಣಿಪುರ ತಲುಪಿದ್ದಾರೆ, ಸರ್ವಾಧಿಕಾರಿ ಹೆದರಿದ್ದಾರೆ ಎಂದ ಕಾಂಗ್ರೆಸ್

ಶಾಂತಿ ಮತ್ತು ಪ್ರೀತಿಯ ಸಂದೇಶದೊಂದಿಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಮಣಿಪುರ ತಲುಪಿದ್ದಾರೆ. ಇದರಿಂದ ಸರ್ವಾಧಿಕಾರಿ ಹೆದರಿದ್ದಾರೆ ! ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.

ಪರಿಹಾರ ಶಿಬಿರಗಳಲ್ಲಿ ನರಳುತ್ತಿರುವ ಜನರನ್ನು ಭೇಟಿ ಮಾಡಲು, ಗಲಭೆ ಪೀಡಿತ ಪ್ರದೇಶಗಳ ಜನರಿಗೆ ಸಾಂತ್ವನ ಹೇಳಲು ಹೊರಟ ಅವರ ಬೆಂಗಾವಲು ಪಡೆಯನ್ನು ಪೊಲೀಸರು ತಡೆದಿದ್ದಾರೆ. ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ವಿಫಲವಾದ ಪ್ರಧಾನಿ ಮೋದಿ ಅವರು ಹಾಗೂ ಅವರ ಡಬಲ್ ಇಂಜಿನ್ ವಿನಾಶಕಾರಿ ಸರ್ಕಾರಗಳು ಶಾಂತಿ ಸಂದೇಶ ಸಾರಲು ಬಂದ ರಾಹುಲ್ ಗಾಂಧಿ ಅವರನ್ನು ಸರ್ವಾಧಿಕಾರ ಬಳಸಿ ತಡೆಯುತ್ತಿದ್ದಾರೆ! ಎಂದು ಕಾಂಗ್ರೆಸ್ ಕಿಡಿಕಾರಿದೆ.

“>

ಮಣಿಪುರ ಹಿಂಸಾಚಾರ ನಡೆದು 2 ತಿಂಗಳಾಗಿದೆ, ಆದರೆ ಪ್ರಧಾನಿ ಮೋದಿ ಹಿಂಸಾಚಾರವನ್ನು ಖಂಡಿಸಲಿಲ್ಲ, ಶಾಂತಿಗಾಗಿ ಮನವಿ ಮಾಡಲಿಲ್ಲ. ಗೃಹ ಸಚಿವರ ಭೇಟಿಯ ನಂತರ ಹಿಂಸಾಚಾರ ಉಲ್ಬಣಗೊಂಡಿದೆ. ಹಿಂಸಾಚಾರವನ್ನು ತಡೆಯಬೇಕಾದವರು ಅವರನ್ನು ತಡೆಯುತ್ತಿದ್ದಾರೆ! ಎಂದು ಕಾಂಗ್ರೆಸ್ ಆಕ್ರೋಶ ಹೊರ ಹಾಕಿದೆ.

ಹತ್ರಾಸ್, ಲಖಿಂಪುರಕ್ಕೆ ಹೋಗುವಾಗಲೂ ರಾಹುಲ್ ಗಾಂಧಿ ಅವರನ್ನು ತಡೆದರು, ಆದರೆ ಅವರು ಎಲ್ಲಿಗೆ ಹೋಗಬೇಕೆಂದು ಹೊರಟರೂ ಅಲ್ಲಿಗೆ ತಲುಪುತ್ತಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ! ಮಣಿಪುರಕ್ಕೆ ಶಾಂತಿ ಬೇಕು, ಸಂಘರ್ಷವಲ್ಲ ಎಂದು ಕಾಂಗ್ರೆಸ್ ಹೇಳಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!