Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಸಂಭ್ರಮದ ರಾಜ್ಯೋತ್ಸವ: ಸಾಧಕರಿಗೆ ಸನ್ಮಾನ

ವರದಿ: ನ.ಲಿ.ಕೃಷ್ಣ

ಮದ್ದೂರು ತಾಲ್ಲೂಕು ಆಡಳಿತದ ವತಿಯಿಂದ ಕರ್ನಾಟಕ – ೫೦ ರ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಬುಧವಾರ ನಡೆಯಿತು.

ಮದ್ದೂರು ಪಟ್ಟಣದ ನರಸಿಂಹಸ್ವಾಮಿ ದೇವಾಸ್ಥಾನದಿಂದ ತಾಯಿ ಭುವೇನೆಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ನಡೆಸಲಾಯಿತು. ಶಾಲಾ ಮಕ್ಕಳ ಪಥ ಸಂಚಲನ ಕ್ರೀಡಾಂಗಣ ಪ್ರವೇಶಿಸಿತು.
ಶಾಸಕ ಉದಯ್ ಅವರು ನಾಡದ್ವಜ, ತಹಶಿಲ್ದಾರ್ ನರಸಿಂಹಮೂರ್ತಿ ಅವರು ರಾಷ್ಟ್ರವನ್ನು ಧ್ವಜಾರೋಹಣ ಮಾಡಿದರು. ಪಥ ಸಂಚನಲನ ನಡೆಸಿದ ಮಕ್ಕಳು ಹಾಗೂ ಪೊಲೀಸ್ ತಂಡ ಧ್ವಜ ವಂದನೆ ಸಲ್ಲಿಸಿದವು.

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳನ್ನು ತೊಡಿಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಮುಖಂಡರಾದ ವಿ ಸಿ ಉಮಾಶಂಕರ್, ಎಂ ಸಿ ಬಸವರಾಜ್, ಸುನಂದಾ ಜಯರಾಮ್, ರವಿ ಸಾವಂದಿಪುರ, ಕುಮಾರ್ ಕೊಪ್ಪ, ಡಾ.ದಯಾನಂದ್, ಮಣಿಮಾಲಾ, ಪ್ರಸಿಲ್ಲಾ ಜ್ಙಾನಕುಮಾರಿ, ಆನಂದಚಾರ್, ಕೃಷ್ಣಪ್ಪ, ಶ್ರೀನಿವಾಸ್ ಹಾಗೂ ಗೌರಮ್ಮ ಅವರನ್ನು ತಾಲ್ಲೂಕು ಆಡಳಿತದಿಂದ ಸನ್ಮಾನಿಸಿ, ಗೌರವಿಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!