ನಿವೃತ್ತ ಯೋಧ ಸಿಪಾಯಿ ಶ್ರೀನಿವಾಸ್ ಅವರಿಗೆ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಹಾಗೂ ನಿವೃತ್ತ ಸೈನಿಕರು ಜನ್ಮದಿನದ ಶುಭಾಶಯ ಕೋರಿದರು.
ಮದ್ದೂರಿನ ಸಿಪಾಯಿ ಹೋಟೆಲಿನ ಸಭಾಂಗಣದಲ್ಲಿ ಅವರ ಅಪಾರ ಅಭಿಮಾನಿಗಳು, ಸ್ನೇಹಿತರು ಹಾಗೂ ನಿವೃತ್ತ ಸೈನಿಕರು ಶ್ರೀನಿವಾಸ್ ಅವರಿಗೆ ಪುಷ್ಪಹಾರ ಹಾಕಿ, ಸಿಹಿ ತಿನ್ನಿಸಿ ಜನ್ಮದಿನದ ಶುಭಾಶಯ ಕೋರಿದರು.
ನಿವೃತ್ತ ಸೈನಿಕರು ಹಾಗೂ ಅಭಿಮಾನಿಗಳಿಂದ ಜನ್ಮದಿನದ ಶುಭಾಶಯ ಸ್ವೀಕರಿಸಿದ ನಿವೃತ್ತ ಯೋಧ, ಕರ್ನಾಟಕ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷರೂ ಆದ ಸಿಪಾಯಿ ಶ್ರೀನಿವಾಸ್ ಮಾತನಾಡಿ, ನನಗೆ ಎಂದಿಗೂ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಇಷ್ಟವಿಲ್ಲ. ಆದರೂ ಸ್ನೇಹಿತರು, ಅಭಿಮಾನಿಗಳು ಪ್ರತಿ ವರ್ಷ ಒತ್ತಾಯದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ನಮ್ಮ ನಿವೃತ್ತ ಸೈನಿಕರು ನನಗೆ ಶುಭಾಶಯ ಹೇಳಲು ಬಂದಿರುವುದು ತುಂಬಾ ಖುಷಿಯ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು. ನಿಮ್ಮೆಲ್ಲರ ಅಭಿಮಾನಕ್ಕೆ ನಾನು ಚಿರ ಋಣಿಯಾಗಿದ್ದೇನೆ.ನನ್ನ ಕೈಲಾದ ಮಟ್ಟಿಗೆ ಸಾಮಾಜಿಕ ಸೇವೆ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗೊರವನಹಳ್ಳಿ ಮಧು,ಅಣ್ಣೂರು ಮನೋಹರ್, ಕರಡಕೆರೆ ಮನು,ಲಕ್ಷ್ಮೇಗೌಡನದೊಡ್ಡಿ ನಂದೀಶ್,ಅಣ್ಣೂರು ಹರೀಶ್, ಉದಯ್,ಗುಡಿಗೆರೆ ಅನಿಲ್ ಮತ್ತಿತರರಿದ್ದರು.