ದೆಹಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರು ದಲಿತ ವಿರೋಧಿಗಳು, ದೇಶದ ಸಂವಿಧಾನದ ಮೇಲೆ ದಾಳಿ ಮಾಡಿದವರು !. ಆರ್ಎಸ್ಎಸ್ – ಸಂಘ ಪರಿವಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಇದಕ್ಕಾಗಿ ನೀವು ಈ ಎಲ್ಲಾ ದೇಶವಿರೋಧಿ ಕೃತ್ಯಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲ ತಿಳಿಸಿದರು.
ಇಂದು ದೆಹಲಿ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರು ದಲಿತ ವಿರೋಧಿಗಳು, ದೇಶದ ಸಂವಿಧಾನದ ಮೇಲೆ ದಾಳಿ ಮಾಡಿದವರು!
ಆರ್ಎಸ್ಎಸ್ / ಸಂಘ ಪರಿವಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ.
ಇದಕ್ಕಾಗಿ ನೀವು ಈ ಎಲ್ಲಾ ದೇಶವಿರೋಧಿ ಕೃತ್ಯಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು.
– @rssurjewala pic.twitter.com/7mixh04rZh— Karnataka Congress (@INCKarnataka) January 8, 2023
“>
ಚಿತ್ರದುರ್ಗದಲ್ಲಿ ಕಪಿಸಿಸಿ ಎಸ್ಸಿ, ಎಸ್ಟಿ ಘಟಕದ ವತಿಯಿಂದ ಭಾನುವಾರ ‘ದಲಿತದ ಐಕ್ಯತಾ ಸಮಾವೇಶ’ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನ್ಯಾಯ, ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ. ನಾವು ಅಧಿಕಾರವನ್ನು ದಲಿತರು, ಶೋಷಿತರು, ಹಿಂದುಳಿದವರ ಜತೆ ಹಂಚಿಕೊಳ್ಳುತ್ತೇವೆ. ಇದು ಕಾಂಗ್ರೆಸ್ ಪಕ್ಷದ ಬದ್ಧತೆ. ಹೀಗಾಗಿ ನೀವು ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು ಎಂದರು.
ಹಾವೇರಿಯಲ್ಲಿ ಬಿಜೆಪಿ ನಾಯಕನ ಮಗ ದಲಿತ ಸಹೋದರಿಯ ಜಮೀನು ಕಸಿಯಲು ಪ್ರಯತ್ನಿಸಿದ್ದಾನೆ. ಚಾಮರಾಜನಗರದಲ್ಲಿ ದಲಿತರು ನೀರು ತೆಗೆದುಕೊಂಡಲೂ ಬಿಜೆಪಿಯವರು ಸಹಿಸುತ್ತಿಲ್ಲ. ಚಿಕ್ಕಮಗಳೂರಿನಲ್ಲಿ ದಲಿತರ ಹತ್ಯೆ ನಡೆದಿದೆ. ಇದು ಬಿಜೆಪಿ ಆಡಳಿತದಲ್ಲಿ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಪರಿಸ್ಥಿತಿಯಾಗಿದೆ. ಇಂತಹ ದಲಿತ ವಿರೋಧಿ ಸರ್ಕಾರವನ್ನು ತೊಲಗಿಸಲು ಎಲ್ಲರು ಪಣತೊಡಬೇಕೆಂದು ಕರೆ ನೀಡಿದರು.