ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಗುರುದೇವರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಜಿ.ಬಿ.ಶಶಿಕುಮಾರ್, ಉಪಾಧ್ಯಕ್ಷರಾಗಿ ಟಿ.ಎಚ್.ಶಶಿಕಲಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಜಿ.ಬಿ.ಶಶಿಕುಮಾರ್ ಮಾತನಾಡಿ, ಸಹಕಾರ ಸಂಘದ ಅಭಿವೃದ್ದಿಗಾಗಿ ಶ್ರಮಿಸಲು ಸಂಘದ ಸದಸ್ಯರು, ಗ್ರಾಮದ ಮುಖಂಡರು ಸಹಕಾರ ನೀಡಬೇಕೆಂದು ಕೋರಿದರು.
ಇದೇ ವೇಳೆ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ನಿರ್ದೇಶಕರಾದ ಕಾಳೇಗೌಡ, ಶಿವಲಿಂಗೇಗೌಡ, ಚಿಕ್ಕೋನು, ಸ್ವಾಮಿಗೌಡ, ಜಿ.ಎನ್.ಸ್ವಾಮಿ, ಕಲಾವತಿ, ಜೈಶೀಲ, ದೊಡ್ಡಮ್ಮ, ಮುಖಂಡರಾದ ಜಿ.ಬಿ.ಅಪ್ಪಾಜಿ. ಪುಟ್ಟೇಗೌಡ, ಎಂ.ಬೋರೇಗೌಡ, ಜಿ.ಸಿ.ಮಾದೇವಯ್ಯ ಸೇರಿದಂತೆ ಹಲವರು ಅಭಿನಂದಿಸಿ ಗೌರವಿಸಿದರು.