Thursday, September 19, 2024

ಪ್ರಾಯೋಗಿಕ ಆವೃತ್ತಿ

ಜರ್ಮನಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕುಬ್ಜರ ಕ್ರೀಡಾಕೂಟದಲ್ಲಿ ಚಿನ್ನದಪದಕ ಪಡೆದು ದೇಶಕ್ಕೆ ಕೀರ್ತಿ ತಂದುಕೊಟ್ಟ ಅಕ್ಕಿಹೆಬ್ಬಾಳು ಮಧುಸೂದನ್: ಗಣ್ಯರ ಸಂತಸ

ಕೆ.ಆರ್. ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ‌ಗ್ರಾಮದ‌ ಮಧುಸೂದನ್ ರವರು ಜರ್ಮನಿಯಲ್ಲಿ ನೆಡೆದ‌ ಒಲಂಪಿಕ್ಸ್ ಕುಬ್ಜರ ವಿವಿಧ ಈಜು ಸ್ಪರ್ಧಾ ಕೂಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಎರಡು ಚಿನ್ನದ‌ಪದಕ ಎರಡು ಬೆಳ್ಳಿ ಪದಕಗಳಿಗೆ ಮತ್ತಿಡುವ ಮೂಲಕ ದೇಶಕ್ಕೆ ಹಾಗೂ ಮಂಡ್ಯ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕೆ ಆರ್ ಪೇಟೆ ತಾಲ್ಲೂಕಿನ ‌ಅಕ್ಕಿಹೆಬ್ಬಾಳು ಗ್ರಾಮದವರಾದ ಮಧುಸೂದನ್ ರವರು ಮೈಸೂರಿನಲ್ಲಿ ಖಾಸಗಿ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದು, ಜರ್ಮನಿಗೆ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ತೆರಳುವ ಸಂದರ್ಭದಲ್ಲಿ ಕೆ ಆರ್ ಪೇಟೆಯ ಸಮಾಜ‌ಸೇವಕ ಮಿತ್ರ ಫೌಂಡೇಷನ್ ಅಧ್ಯಕ್ಷರಾದ ವಿಜಯರಾಮೇಗೌಡ ರವರು ಧನ ಸಹಾಯ ‌ಮಾಡುವ ಮೂಲಕ ಶುಭಹಾರೈಸಿದ್ದರು.

ಕ್ರೀಡಾಕೂಟದಲ್ಲಿ ಭಾಗವಹಿಸಿ ನಾಲ್ಕು ಪದಕಗಳನ್ನು ದೇಶಕ್ಕೆ ಹಾಗೂ ತಾಲ್ಲೂಕಿಗೆ, ಹುಟ್ಟೂರಿಗೆ ಕೀರ್ತಿ ತಂದಿರುವ ಮದುಸೂದನ್ ಅವರನ್ನು ಶಾಸಕರಾದ ಹೆಚ್,ಟಿ ಮಂಜು, ಮಾಜಿ ಸಚಿವ ನಾರಾಯಣಗೌಡ, ಮಾಜಿ ಶಾಸಕರಾದ ಕೆ,ಬಿ ಚಂದ್ರಶೇಖರ್, ಬಿ.ಪ್ರಕಾಶ್, ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ ಅಧ್ಯಕ್ಷರಾದ ಬಿಎಲ್,ದೇವರಾಜು, ಸಮಾಜ ಸೇವಕರಾದ ಆರ್,ಟಿ,ಓ ಮಲ್ಲಿಕಾರ್ಜುನ್, ವಿಜಯ್ ರಾಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಂದ್ರ ಕುಮಾರ್, ಪ್ರಥಮ ದರ್ಜೆ ಗುತ್ತಿಗೆದಾರ ಅಕ್ಕಿಹೆಬ್ಬಾಳು ರಘು ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ,ಎನ್,ದಿವಾಕರ್, ಟಿಎನ್ ರಾಜೇಶ್, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷೆ ಲೋಲಾಕ್ಷಿಜಗದೀಶ್,ಸೇರಿದಂತೆ ತಾಲೋಕಿನ ವಿವಿಧ ಗಣ್ಯರು ಅಭಿನಂದಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!