Thursday, September 19, 2024

ಪ್ರಾಯೋಗಿಕ ಆವೃತ್ತಿ

ಬೊಮ್ಮಾಯಿ ಅವರನ್ನು ಮುಗಿಸಿದರೆ “ಟಾರ್ಗೆಟ್ ಲಿಂಗಾಯತ” ಕಾರ್ಯಾಚರಣೆ ಪೂರ್ಣ ; ಕಾಂಗ್ರೆಸ್

ಜೋಶಿ, ಸಂತೋಷ್ ಅವರುಗಳು ಸಂಸದ ಪ್ರತಾಪ್ ಸಿಂಹ ಅವರ ಹೆಗಲ ಮೇಲೆ ಗನ್ನಿಟ್ಟು ಶೂಟ್ ಮಾಡಿದ ಗುಂಡು ಬೊಮ್ಮಾಯಿ ಅವರ ಎದೆಗೆ ತಗುಲಿದೆ! ಎಂದು ಕಾಂಗ್ರೆಸ್ ಹೇಳಿದೆ.

“>

ಸಿಎಂ ಆದರೂ ಬಿಜೆಪಿಯ ಗರ್ಭಗುಡಿಯ ಒಳಗೆ ಪ್ರವೇಶ ಪಡೆಯಲಾಗದ ವಲಸಿಗ ಬೊಮ್ಮಾಯಿಯವರೇ ಜೋಶಿ ಸಂತೋಷರ ಮುಂದಿನ ಟಾರ್ಗೆಟ್! ಬೊಮ್ಮಾಯಿಯವರನ್ನು ಮುಗಿಸಿದರೆ “ಟಾರ್ಗೆಟ್ ಲಿಂಗಾಯತ” ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದಂತಾಗುತ್ತದೆ! ಎಂದು ಕಾಂಗ್ರೆಸ್ ಟ್ವಿಟ್ ಮಾಡಿದೆ.

ಸಂವಿಧಾನದಲ್ಲಿ ಬಲವಂತದ ಮತಾಂತರಕ್ಕೂ ಅವಕಾಶವಿಲ್ಲ, ಹಾಗೆಯೇ ಧಾರ್ಮಿಕ ಸ್ವತಂತ್ರವನ್ನು ಕಸಿಯುವುದಕ್ಕೂ ಅವಕಾಶವಿಲ್ಲ. ಧಾರ್ಮಿಕ ಸ್ವತಂತ್ರವನ್ನು ಕಸಿಯುವ ಸಂವಿಧಾನ ವಿರೋಧಿ ಕಾಯ್ದೆಯನ್ನು ರದ್ದುಪಡಿಸುತ್ತಿರುವುದಕ್ಕೆ “ಬಲವಂತದ ಮತಾಂತರಕ್ಕೆ ಕಾಂಗ್ರೆಸ್‌ನಿಂದ ಗ್ರೀನ್ ಸಿಗ್ನಲ್” ಎಂಬ ಶೀರ್ಷಿಕೆ ಕೊಟ್ಟು ಪ್ರೊಪಗಂಡಾ ಕಾರ್ಯಕ್ರಮ ಮಾಡಿದ ಮಾಧ್ಯಮಗಳ ನಡೆ ಸಂವಿಧಾನ ಹಾಗೂ ಕಾನೂನು ವಿರೋಧಿಯಾಗಿರುತ್ತದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. 

ಜಾಹೀರಾತು

ಮಾಧ್ಯಮಗಳು ಬಳಸುತ್ತಿರುವ ಶೀರ್ಷಿಕೆ ಬಿಜೆಪಿ ಪ್ರಾಯೋಜಿತ ಶೀರ್ಷಿಕೆಗಳೇ? ಸಂವಿಧಾನಕ್ಕೆ ಪೂರಕವಾದ ಸರ್ಕಾರದ ತೀರ್ಮಾನಗಳನ್ನು ಬಿಜೆಪಿ ಓಲೈಕೆಗಾಗಿ ಇಂತಹ ಶೀರ್ಷಿಕೆ ಬಳಸಿ ಟೀಕೆ ಮಾಡುತ್ತಿರುವ ಹಿಂದೆ ಯಾವ ಲಾಬಿ ಇದೆ? ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದರೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!