Thursday, September 19, 2024

ಪ್ರಾಯೋಗಿಕ ಆವೃತ್ತಿ

ಸ್ಮೃತಿ ಇರಾನಿ ಸೋಲಿಸಿ ಸೇಡು ತೀರಿಸಿಕೊಂಡ ಗಾಂಧಿ ಕುಟುಂಬ

ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರ ಯಾರಿಗೆ ತಾನೇ ಗೊತ್ತಿಲ್ಲ. ಹಲವು ದಶಕಗಳಿಂದ ಗಾಂಧಿ ಮನೆತನದ ಜನರನ್ನು ದೆಹಲಿಗೆ ಕಳುಹಿಸಿದ ಕ್ಷೇತ್ರ ಅಮೇಥಿ.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸಹ ಪ್ರಧಾನಿ ಮೋದಿಜೀ ಅವರ ಕ್ಯಾಬಿನೆಟ್ ಪ್ರಭಾವಿ ಮಂತ್ರಿ ಸ್ಮೃತಿ ಹಿರಾನಿ ಅಮೇಥಿಯಲ್ಲಿ ಸೋಲಿಸಿ‌ ಶಾಕ್ ನೀಡಿದ್ದರು.

ಆದರೆ 2024 ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರ ಸಾಕಷ್ಟು ಕುತೂಹಲ ಕೆರಳಿಸಿತ್ತು. ಏಕೆಂದರೆ ಅಮೇಥಿ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿಯವರೇ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರೆ ಗಾಂಧಿ ಕುಟುಂಬದ ನಿಷ್ಟ ಕಿಶೋರಿ ಲಾಲ್ ಶರ್ಮ ಅವರನ್ನು ಅಮೇಥಿಯಿಂದ ಕಣಕ್ಕಿಳಿಸಿದ ಗಾಂಧಿ ಕುಟುಂಬ ಬೇರೆಯದ್ದೇ ತಂತ್ರ ಹೆಣೆದಿತ್ತು.

ರಾಜೀವ್ ಗಾಂಧಿ ಕಾಲದಿಂದಲೂ ಸಹ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಪಿ.ಎ ಆಗಿ ಪರದೆಯ ಹಿಂದೆ ಕೆಲಸ ಮಾಡಿದ ಕಿಶೋರಿ ಲಾಲ್ ಶರ್ಮ ಅವರನ್ನು ಅಮೇಥಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಡಿದಾಗ ಕ್ಷೇತ್ರದ ಜನರು ಸೇರಿದಂತೆ ದೇಶದ ಜನರು ಹೌಹಾರಿದ್ದರು.

ಯಾವಾಗ ರಾಹುಲ್, ಪ್ರಿಯಾಂಕ ಹಾಗೂ ಸೋನಿಯಾ ಗಾಂಧಿ ತಂತ್ರಗಾರಿಕೆ ಮಾಡಿ ಅಮೇಥಿಯಿಂದ ಕಾಂಗ್ರೆಸ್ ಕಾರ್ಯಕರ್ತ ಕಿಶೋರಿಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಿದರೋ, ಆಗ ಸ್ಮೃತಿ ಇರಾನಿ ರಾಹುಲ್ ಗಾಂಧಿ ನನ್ನ ವಿರುದ್ಧ ಸ್ಪರ್ಧೆ ಮಾಡಲು ಹೆದರುತ್ತಿದ್ದಾರೆ ಎಂದೇ ಪ್ರಚಾರ ಸಭೆಗಳಲ್ಲಿ ಹೇಳಿಕೊಂಡು ಬಂದಿದ್ದರು.

ಆದರೆ ಗಾಂಧಿ ಕುಟುಂಬದ ಲೆಕ್ಕಾಚಾರವೇ ಬೇರೆ ಇತ್ತು. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಸ್ಮೃತಿ ಇರಾನಿಯನ್ನು ಸೋಲಿಸುವುದು ಅವರ ಉದ್ದೇಶವಾಗಿತ್ತು. ಅದರಂತೆ ಅಮೇಥಿಯಲ್ಲಿ ಕಿಶೋರಿ ಲಾಲ್ ಶರ್ಮ ಭರ್ಜರಿ ಗೆಲುವು ಸಾಧಿಸುವ ಮೂಲಕ ಸ್ಮೃತಿ ಇರಾನಿಯನ್ನು ಮಖಾಡೆ ಮಲಗಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ಕಿಶೋರಿಲಾಲ್ ಶರ್ಮಾ ಅವರ ಮೂಲಕ ಸ್ಮೃತಿ ಇರಾನಿಯನ್ನು ಸೋಲಿಸುವ ಮೂಲಕ ರಾಹುಲ್ ಗಾಂಧಿ ಕಳೆದ ಬಾರಿಯ ಚುನಾವಣೆಯ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ ಎಂದೇ ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.

ಕಿಶೋರಿ‌ ಲಾಲ್ ಶರ್ಮಾ ಗೆಲ್ಲುವ ಮೂಲಕ ದೇಶದ ಚುನಾವಣಾ ಇತಿಹಾಸದಲ್ಲಿ‌ ಹೊಸ ಆಧ್ಯಾಯ ಆರಂಭಿಸಿದ್ದಾರೆ ಎಂದೇ ಹೇಳಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!