Thursday, September 19, 2024

ಪ್ರಾಯೋಗಿಕ ಆವೃತ್ತಿ

ಕ್ರೈಸ್ತ ಧರ್ಮ ಮತಾಂತರಕ್ಕೆ ಯತ್ನ : ಐವರ ಬಂಧನ

ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಯಲ್ಲಿ ಧಾರ್ಮಿಕ ಮತಾಂತರಕ್ಕೆ ಯತ್ನಿಸಿದ ಐವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕೆ.ಎಂ.ದೊಡ್ಡಿ ಪೋಲಿಸರು ಇ.ಎನ್. ಕುಮಾರ ನಾಗೇಶ ಮತ್ತು ಇ.ಎನ್. ಮಳವಳ್ಳಿ ಪೇಟೆ ಸಮೀಪದ ಕ್ಯಾತನಹಳ್ಳಿ ನಿವಾಸಿಗಳಾದ ವಿಜಯ್ ಗೌಡ; ಕೆ.ಆರ್. ಕಂದೇಗಾಲದ ಹೇಮಂತ್ ಕುಮಾರ್; ಮೈಸೂರಿನ ಸುಮಂತ್; ಮತ್ತು ಚಾಮರಾಜನಗರ ನಿವಾಸಿ ಎಸ್.ಸಿ.ಸಂದೀಪ್ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಮತ್ತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳು ಅಣ್ಣೂರು ಗ್ರಾಮದ ಚರ್ಚ್ ಬಳಿ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುವಂತೆ ಕರಪತ್ರಗಳನ್ನು ಹಂಚುತ್ತಿದ್ದರು. ಹಿಂದೂ ದೇವರುಗಳನ್ನು ಅವಹೇಳನ ಮಾಡಿ, ನಿಂದನೆ ಮತ್ತು ಮತಾಂತರಕ್ಕೆ ಆಮಿಷ ಒಡ್ಡಿದ ಆರೋಪವೂ ಅವರ ಮೇಲಿತ್ತು. ಆರೋಪಿಗಳು ವಿಚಾರಣೆ ವೇಳೆ ಮತಾಂತರ ಯತ್ನದ ಬಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಚರ್ಚ್ ಬಳಿ ಮೆಣಸಗೆರೆ ಗ್ರಾಮದ ಶಿವರಾಮ ಎಂಬುವವರಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಆಗುವಂತೆ ಯವಕರು ಯತ್ನಿಸಿದರು ಎನ್ನಲಾಗಿದೆ. ಮತ ಪ್ರಚಾರವನ್ನು ವಿರೋಧಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು ಐವರು ಆರೋಪಿಗಳನ್ನು ಬಂಧಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!