Thursday, September 19, 2024

ಪ್ರಾಯೋಗಿಕ ಆವೃತ್ತಿ

ಯುಪಿ | ಅತೀಕ್ ಅಹ್ಮದ್ ಸಾವಿಗೂ ಮುನ್ನ ಬರೆದ ಪತ್ರ ಸಿಎಂ-ಸಿಜೆಐ’ಗೆ : ಅತೀಕ್ ವಕೀಲ

ಹತ್ಯೆಯಾಗುವ 18 ದಿನಗಳ ಮೊದಲು ಅತೀಕ್ ಅಹ್ಮದ್ ಬರೆದಿರುವ ಅಂತಿಮ ಪತ್ರವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಉತ್ತರ ಪ್ರದೇಶ ಸಿಎಂ ಕಚೇರಿಗೆ ಕಳುಹಿಸಲಾಗಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ.

ಅತೀಕ್ ಅಹ್ಮದ್ ಅವರ ಪತ್ರವನ್ನು ಭಾರತದ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ. “ಮುಚ್ಚಿದ ಲಕೋಟೆಯಲ್ಲಿರುವ ಆ ಪತ್ರವು ನನ್ನ ಬಳಿ ಇಲ್ಲ ಅಥವಾ ನಾನು ಕಳುಹಿಸಿಲ್ಲ. ಅದನ್ನು ಬೇರೆಡೆ ಇರಿಸಲಾಗಿದೆ ಮತ್ತು ಬೇರೆ ಯಾರೋ ಕಳುಹಿಸಿದ್ದಾರೆ. ಪತ್ರದ ವಿಷಯ ನನಗೆ ತಿಳಿದಿಲ್ಲ” ಎಂದು ಅವರ ವಕೀಲ ವಿಜಯ್ ಮಿಶ್ರಾ ಹೇಳಿದ್ದಾರೆ.

ಯಾವುದೇ ಅವಘಡಗಳು ಸಂಭವಿಸಿದಲ್ಲಿ ಅಥವಾ ಹತ್ಯೆಯಾಗಿದ್ದರೆ, ಮುಚ್ಚಿದ ಲಕೋಟೆಯಲ್ಲಿರುವ ಪತ್ರವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಕಳುಹಿಸಬೇಕು ಎಂದು ಅತೀಕ್ ಅಹ್ಮದ್ ಹೇಳಿದ್ದರು.

“ಆ ಜೈಲಿನೊಳಗೆ ಕೆಲವು ಪೊಲೀಸ್ ಅಧಿಕಾರಿಗಳು ತನಗೆ ಬೆದರಿಕೆ ಹಾಕಿದ್ದಾರೆ ಎಂದು ಅತೀಕ್ ನನಗೆ ತಿಳಿಸಿದ್ದಾನೆ. ಅಧಿಕಾರಿ ಅವನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಮತ್ತು ಎಲ್ಲಾ ವಿವರಗಳು ಪತ್ರದಲ್ಲಿದೆ” ಎಂದು ಅತೀಕ್ ನ   ವಕೀಲರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!