Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಮದ್ಯದಂಗಡಿ ಸ್ಥಳಾಂತರಕ್ಕೆ ಗ್ರಾಮಸ್ಥರ ಆಗ್ರಹ

ಮಳವಳ್ಳಿ ತಾಲ್ಲೂಕಿನ ಹಾಡ್ಲಿ ಸರ್ಕಲ್ ಸಮೀಪದ ಮೇಗಳಪುರ ರಸ್ತೆಯಲ್ಲಿರುವ ವಿನಾಯಕ ವೈನ್ ಮದ್ಯದಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ  ಹಾಡ್ಲಿ ಗ್ರಾಮ ಪಂಚಾಯಿತಿ ವ್ಯಾಪಿಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮಳವಳ್ಳಿ ಉಪವಿಭಾಗದ ಮೇಗಳಪುರ ರಸ್ತೆಯಲ್ಲಿರುವ ವಿನಾಯಕ ವೈನ್ ಇರುವ ಜಾಗದಲ್ಲಿ ವಾಸದ ಮನೆಗಳು ತಲೆ ಎತ್ತಿದ್ದು, ಸಮೀಪದಲ್ಲೇ ಎರಡು ವಿದ್ಯಾಸಂಸ್ಥೆ ಇರುವುದರಿಂದ ಈ ಮದ್ಯದಂಗಡಿಯನ್ನು ಕೂಡಲೇ ಸ್ಥಳಾಂತರ ಮಾಡಬೇಕೆಂದು ಮೇಗಳಪುರ ಗ್ರಾಮದ ಮುಖಂಡ ಗೋಪಾಲಗೌಡ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಪ್ರಸ್ತುತ ಸ್ಥಳಾಂತರ ಮಾಡಲು ನಿರ್ಧರಿಸುವ ಸ್ಥಳವು ವಾಣಿಜ್ಯ ಚಟುವಟಿಕೆಯ ಪ್ರದೇಶವಾಗಿದ್ದು, ಮದ್ಯದಂಗಡಿಗೆ ಸೂಕ್ತವಾಗಿದೆ. ಹಾಗಾಗಿ ವಿನಾಯಕ ವೈನ್ಸ್ ಮದ್ಯದಂಗಡಿಯನ್ನು ಅಲ್ಲಿಗೆ ಸ್ಥಳಾಂತರ ಮಾಡಿಕೊಡಬೇಕೆಂಬುದು ಈ ವ್ಯಾಪ್ತಿಯ ಗ್ರಾಮಸ್ಥರ ಒತ್ತಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!