Thursday, September 19, 2024

ಪ್ರಾಯೋಗಿಕ ಆವೃತ್ತಿ

ದೇಹ -ಮನಸ್ಸಿನ ಹತೋಟಿಗೆ ಯೋಗಭ್ಯಾಸ ಸಹಕಾರಿ- ಶಿವರುದ್ರಸ್ವಾಮಿ

ನೆಮ್ಮದಿ ಜೀವನಕ್ಕೆ ಯೋಗ ಸೂಕ್ತ, ದೇಹ ಹಾಗೂ ಮನಸ್ಸಿನ ಹತೋಟಿಗೆ ಯೋಗಭ್ಯಾಸ ಸಹಕಾರಿ ಎಂದು ಯೋಗ ಗುರು ಎಚ್.ವಿ. ಶಿವರುದ್ರಸ್ವಾಮಿ ತಿಳಿಸಿದರು.

ಮಂಡ್ಯ ತಾಲೂಕಿನ ಹೊರವಲಯದಲ್ಲಿರುವ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗಾಗಿ ನಡೆದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಳೆಯ ವಯಸ್ಸಿನಲ್ಲಿ ಮಕ್ಕಳು ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡಿದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ ಎಂದರು. ಕಾಲೇಜು ವಿದ್ಯಾರ್ಥಿನಿಯರಿಗೆ ಉಸಿರಾಟದ ವ್ಯಾಯಾಮ, ಓಂಕಾರ, ಸರಳ ಆಸನಗಳು, ಭ್ರಮರ ಪ್ರಾಣಾಯಾಮ ಮತ್ತು ಧ್ಯಾನದ ಅಭ್ಯಾಸ ಹೇಳಿಕೊಟ್ಟರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ರಾಜು, ಕಾರ್ಯದರ್ಶಿ ಪ್ರೊ.ನಾಗೇಂದ್ರ, ಪ್ರಾಂಶುಪಾಲ ಎ.ಎಸ್. ಶ್ರೀಕಂಠಪ್ಪ ಹಾಗೂ ಉಪ ಪ್ರಾಂಶುಪಾಲ ಪ್ರೊ. ಮಂಜುನಾಥ್ ಉಪಸ್ಥಿತರಾಗಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!