ಮದ್ದೂರು ತಾಲ್ಲೂಕು ಆಡಳಿತವು 67 ನೇ ಕರ್ನಾಟಕ ರಾಜ್ಯೊತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಏಳು ಮಂದಿ ಗಣ್ಯರನ್ನು ಸನ್ಮಾನಿಸಿತು
ಪಂಚಾಯತ್ ರಾಜ್ ವಿಷಯ ತಜ್ಞರಾದ ಕ್ಯಾತಘಟ್ಟ ಕೆ.ರವಿಕುಮಾರ್ ಅವರನ್ನು ಗ್ರಾಮೀಣ ಸೇವೆ ಪರಿಗಣಿಸಿ ಸನ್ಮಾನಿಸಿ ಅಭಿನಂದಿಸಲಾಯಿತು. ಪೂಜಾ ಕುಣಿತ ಗಾರುಡಿ ಗೊಂಬೆ ಕುಣಿತ ಕಲಾವಿದ ಚಿಕ್ಕರಸಿನಕೆರೆ ಮಹಾದೇವ್, ಸಹಕಾರ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ಗೆಜ್ಜಲಗೆರೆ ಜಿ.ಟಿ.ಪುಟ್ಟಸ್ವಾಮಿ, ರಂಗಭೂಮಿ ಕ್ಷೇತ್ರದ ಸಾಧನೆಗಾಗಿ ಬೊಚ್ಚಿನಿಂಗೇಗೌಡ ಸಬ್ಬನಹಳ್ಳಿ, ಸಾಮಾಜಿಕ ಸೇವೆ ಪರಿಗಣಿಸಿ ಮದ್ದೂರಿನ ಮೌಲಾನ ಅಬ್ದುಲ್ ಕರೀಂ, ಅನುಷಾ ಬಿ.ಎಸ್. ಹಾಗೂ ರಕ್ಷಿತಾ ಎ.ಸಿ.ಆರೆಚಾಕಹಳ್ಳಿ ಈ ವಿದ್ಯಾರ್ಥಿನಿಯರನ್ನು ಶೈಕ್ಷಣಿಕ ಸಾಧನೆ ಪರಿಗಣಿಸಿ ಸನ್ಮಾನಿಸಲಾಯಿತು
ಶಾಸಕ ಡಿ.ಸಿ.ತಮ್ಮಣ್ಣ ಪುರಸಭೆ ಅಧ್ಯಕ್ಷ ಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ, ಪುರಸಭೆ ಸದಸ್ಯರಾದ ಮ. ನ.ಪ್ರಸನ್ನ ಕುಮಾರ್, ಅದಿಲ್ ಆಲಿಖಾನ್ ಮತ್ತು ವೆಂಕಟ ಚಲುವಯ್ಯ, ಮಹದೇವ್, ತಹಶೀಲ್ದಾರ್ ನರಸಿಂಹ ಮೂರ್ತಿ, ಬಿಇಓ ಕಾಳೀರಯ್ಯ, ದೈಹಿಕ ಶಿಕ್ಷಣ ಶಿಕ್ಷಕ ಶ್ರೀಕಂಠು ಅವರು ಸಾಧಕರನ್ನು ಸನ್ಮಾನಿಸಿದರು