ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ತೆರಳಿದ ಸಂಸದ ಪ್ರತಾಪ್ ಸಿಂಹ ಅವರನ್ನು ತೆಡೆದು ನಿಲ್ಲಿಸಿ, ಬಿಜೆಪಿಯ ಜನ ವಿರೋಧಿ ನೀತಿಗಳ ಪ್ರಶ್ನಿಸಿದ ಮತದಾರರು ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಈಗ ಜನರ ಸಮಯ ಬಂದಿದೆ,
ಜನರ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರವಿಲ್ಲದ ಉತ್ತರಕುಮಾರರಾಗಿದ್ದಾರೆ!Dear @BJP4Karnataka, ಶಾಸಕರನ್ನು ಅಪಹರಿಸಿ ಅನೈತಿಕ ಸರ್ಕಾರ ಮಾಡಿದಂತಲ್ಲ ಜನರನ್ನು ಎದುರಿಸುವುದು.
ಅಧಿಕಾರದುದ್ದಕ್ಕೂ ಜನವಿರೋಧಿಯಾಗಿ ನಡೆದುಕೊಂಡ ಬಿಜೆಪಿಗೆ ಜನಾಕ್ರೋಶದ ಅಸಲಿ ದರ್ಶನವಾಗುತ್ತಿದೆ.
ಹೇಗಿದೆ ಜನಾಭಿಪ್ರಾಯ @mepratap? pic.twitter.com/MlvGp5KDxw
— Karnataka Congress (@INCKarnataka) April 21, 2023
“>
ಮತದಾರ ಏಕಾಏಕಿ ಪ್ರಶ್ನೆಗಳಿಗೆ ತಬ್ಬಿಬ್ಬಾದ ಸಂಸದರು ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ತಿಣುಕಾಡುವಂತಾಯ್ತು. ” ನಿಮ್ಮ ಪಕ್ಷದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಬದಲಾಸುತ್ತೇವೆಂದು ಹೇಳುತ್ತಾರೆ. ನೀವು ದೇಶಕ್ಕೆ ಯಾವ ಸಂದೇಶ ನೀಡುತ್ತೀದ್ದೀರಿ ? ನಿಮ್ಮ ಬಿಜೆಪಿ ಸರ್ಕಾರ ಬಂದ ಮೇಲೆ 10 ಕೆ.ಜಿ. ಕೊಡುತ್ತಿದ್ದ ಅಕ್ಕಿಯನ್ನು, 5 ಕೆ.ಜಿ. ಇಳಿಸಿದ್ದೀರಿ ಏಕೆ ? ಗ್ಯಾಸ್ ಬೆಲೆ, ಪೆಟ್ರೋಲ್ ಬೆಲೆ ಎಷ್ಟಾಗಿದೆ ಗೊತ್ತಾ ? ಇದಕ್ಕೆ ಉತ್ತರ ಕೊಡಿ ಎಂದು ಮುಗಿಬಿದ್ದರು.
ಇದರಿಂದ ತೀವ್ರ ಗಲಿಬಿಲಿಗೊಂಡ ಸಂಸದರಿಂದ ತೀವ್ರ ಮುಖಭಂಗಕ್ಕೆ ಒಳಗಾಗಿ, ಜನರ ಪ್ರಶ್ನೆಗಳಿಗೂ ಉತ್ತರಿಸಲಾಗದೆ ಮೌನವಹಿಸಿದರು.
ಉತ್ತರವಿಲ್ಲದ ಉತ್ತರಕುಮಾರ ಕಾಂಗ್ರೆಸ್ ಟ್ವೀಟ್
ಈಗ ಜನರ ಸಮಯ ಬಂದಿದೆ, ಜನರ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರವಿಲ್ಲದ ಉತ್ತರಕುಮಾರರಾಗಿದ್ದಾರೆ!ಡಿಯರ್ ಪ್ರತಾಪ್ ಸಿಂಹ ಅವರೇ ಶಾಸಕರನ್ನು ಅಪಹರಿಸಿ ಅನೈತಿಕ ಸರ್ಕಾರ ಮಾಡಿದಂತಲ್ಲ ಜನರನ್ನು ಎದುರಿಸುವುದು. ಅಧಿಕಾರದುದ್ದಕ್ಕೂ ಜನವಿರೋಧಿಯಾಗಿ ನಡೆದುಕೊಂಡ ಬಿಜೆಪಿಗೆ ಜನಾಕ್ರೋಶದ ಅಸಲಿ ದರ್ಶನವಾಗುತ್ತಿದೆ. ಹೇಗಿದೆ ಜನಾಭಿಪ್ರಾಯ ಪ್ರತಾಪ್ ಸಿಂಹ ಅವರೇ ? ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಲೇವಡಿ ಮಾಡಿದೆ.