ಮದ್ದೂರು ಛಾಯಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 184ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ನಿಕಾನ್ ಕಂಪನಿಯ ವತಿಯಿಂದ ಛಾಯಾಗ್ರಾಹಕರಿಗೆ ವೆಡ್ಡಿಂಗ್ ಕ್ಲಾಸ್ ಕಾರ್ಯಾಗಾರ, ಛಾಯಾ ಕ್ಷೇಮಾಭಿವೃದ್ಧಿ ಸಂಘ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಂಘದ ಸದಸ್ಯರಿಗೆ ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮವು ಮಂಡ್ಯದ ನಗರದ ಅಮರಾವತಿ ಹೋಟೆಲ್ ನಲ್ಲಿ ಯಶಸ್ವಿಯಾಗಿ ನಡೆಯಿತು.
ಇದೇ ಸಂದರ್ಭದಲ್ಲಿ ಮದ್ದೂರು ತಾಲ್ಲೂಕು ಅಂತರಾಷ್ಟ್ರೀಯ ರೋಟರಿ ಸಂಸ್ಥೆಯಲ್ಲಿ ಅಧ್ಯಕ್ಷರಾಗಿರುವ ಸಂಘದ ನಿರ್ದೇಶಕರಾದ ಎಂ.ಸಿ .ಶಶಿಗೌಡ ರವರನ್ನು ಸನ್ಮಾನಿಸಲಾಯಿತು. ಮಂಡ್ಯ ಜಿಲ್ಲಾ ಮಾಂಡವ್ಯ ವೃತ್ತಿಪರ ಛಾಯಾಗ್ರಾಹಕರ ಸಂಘದ ನಿರ್ದೇಶಕರಾದ ವಿನೋದ್, ಕಾರ್ತಿಕ್, ಸುರೇಶ್, ರಾಜು, ದಿನೇಶ್ ಕುಮಾರ್, ಜಗದೀಶ್ ಹಾಗೂ ಹಿರಿಯ ಛಾಯಾಗ್ರಾಹಕರ ಮಧು ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ ಛಾಯಾ ಕ್ಷೇಮಾಭಿವೃದ್ಧಿ ಸಂಘ (ನೊಂ) ದ ಉಪಾಧ್ಯಕ್ಷ ಸಿ.ರಾಜಶೇಖರಮೂರ್ತಿ, ಖಜಾಂಚಿ ಎಂ.ಎಸ್.ನಟೇಶ್, ಕಾರ್ಯದರ್ಶಿ ಎಂ.ಆರ್.ರಾಜೇಶ್, ನಿರ್ದೇಶಕರಾದ ಶಂಕರ್, ಉಮೇಶ್, ಸಂಜು, ಬೆಸಗರಹಳ್ಳಿ ರಾಜೇಶ್ ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ದರ್ಶನ್ ಗೌಡ ಹಾಗೂ ಮಹಾದೇವಪ್ಪ , ಭೈರವ. ನಾಗರಾಜ್, ಜಗದೀಶ್, ನಿಂಗಣ್ಣ ಮತ್ತಿತರರಿದ್ದರು. ಈ ಕಾರ್ಯಗಾರದಲ್ಲಿ ಕೊಳ್ಳೇಗಾಲ, ಮಳವಳ್ಳಿ, ನಾಗಮಂಗಲದಿಂದ 85 ಹೆಚ್ಚು ಛಾಯಾಗ್ರಾಹಕರು ಭಾಗವಹಿಸಿದ್ದರು.