Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಂಬಿ ಜನ್ಮದಿನ : ಹಣ್ಣು ಹಂಪಲು ವಿತರಣೆ

ರೆಬಲ್‌ಸ್ಟಾರ್ ಡಾ. ಅಂಬರೀಶ್ ಅವರ ಜನ್ಮದಿನವನ್ನು ಇಂದು ಪಟ್ಟಣದಲ್ಲಿ ವಿವಿಧ ಜನಪರ ಕಾರ್ಯಕ್ರಮ ನಡೆಸುವ ಮೂಲಕ ಅಂಬರೀಶ್ ಅಭಿಮಾನಿಗಳು ಆಚರಿಸಿದರು.

ಸಂಘದ ಗೌರವಾಧ್ಯಕ್ಷ ಎಸ್.ಎಲ್.ಲಿಂಗರಾಜು ನೇತೃತ್ವದಲ್ಲಿ ಪಟ್ಟಣದ ಮೈಸೂರು -ಬೆಂಗಳೂರು ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಅಂಬರೀಶ್ ಅಭಿಮಾನಿಗಳು ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ನಂತರ ಹಾಲಿನ ಅಭಿಷೇಕ ಮಾಡಿ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಅಲ್ಲಿನ ಒಳ ರೋಗಿಗಳಿಗೆ ಹಣ್ಣು-ಹಂಪಲು,ಬ್ರೆಡ್ ವಿತರಣೆ ಹಾಗೂ ರೋಗಿಗಳಿಗೆ ಬಿಡುವಿಲ್ಲದೆ ಸೇವೆ ಸಲ್ಲಿಸುವ ಆಸ್ಪತ್ರೆಯ ವೈದ್ಯರಿಗೆ ಗೌರವ ಸಮರ್ಪಣೆ ಮಾಡಿದರು.

ಅಂಬರೀಶ್ ಅಭಿಮಾನಿ ಸಂಘದ ಗೌರವಾಧ್ಯಕ್ಷ ಎಸ್‌. ಎಲ್.ಲಿಂಗರಾಜು ಮಾತನಾಡಿ, ಕಲಿಯುಗದ ಕರ್ಣನಂತಿದ್ದ ಅಂಬರೀಶ್ ಅಣ್ಣನ ಸೇವೆಗಳು ಅಪಾರವಾದುದು. ರಾಜ್ಯದ ಹಾಗೂ ಅವರ ಅಭಿಮಾನಿಗಳಿಗೆ ನೀಡಿರುವ ಪ್ರೀತಿಗೆ ನಾವೆಲ್ಲರೂ ಮಾರು ಹೋಗಿದ್ದು, ಅವರ ಜನ್ಮದಿನದ ನೆನಪಿಗೆ ಜನಪರ ಸೇವೆಗಳನ್ನು ಮಾಡಲು ಅಭಿಮಾನಿ ಸಂಘ ಮುಂದಾಗಿರುವುದರಿಂದ ಅವರ ನೆನಪು ಸದಾ ಕಾಲ ಚಿರವಾಗಿರುವುದಕ್ಕೆ ಕಾರಣವಾಗಿದೆ ಎಂದರು.

ಶ್ರೀರಂಗಪಟ್ಟಣ ತಾಲೂಕು ಅಂಬರೀಶ್ ಅಭಿಮಾನಿ ಸಂಘದ ಅಧ್ಯಕ್ಷ ಮಹೇಶ್ ಟಿ.ಎಂ.ಹೊಸೂರು, ಪುರಸಭೆ ಮಾಜಿ ಸದಸ್ಯ ಸುನೀಲ್, ಈ.ಕುಮಾರ್, ಯುವ ಮುಖಂಡ ದರ್ಶನ್ ಲಿಂಗರಾಜು, ಹಿರಿಯ ಕಾಂಗ್ರೆಸ್ ಮುಖಂಡ ಗುರುಲಿಂಗಣ್ಣ,ಕೆಪಿಸಿಸಿ ಸದಸ್ಯ ಎನ್.ಗಂಗಾಧರ್, ತಮ್ಮಣ್ಣ, ರಘು, ಒಕ್ಕಲಿಗರ ಸಂಘದ ಅಧ್ಯಕ್ಷ ಗೌಡಹಳ್ಳಿ ದೇವರಾಜು, ಸಿ.ಸ್ವಾಮೀಗೌಡ, ಕೆಆರ್‌ಎಸ್ ರಾಮೇಗೌಡ, ಶಾಮಯಾನ ಪುಟ್ಟರಾಜು, ನಗುವನಹಳ್ಳಿ ಮಹದೇವ ಸ್ವಾಮಿ, ಬೆಳಗೊಳ ಮಂಜು, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು, ಕೆಂಪೇಗೌಡ ಯುವ ವೇದಿಕೆ ಅಧ್ಯಕ್ಷ ಮಹೇಶ್, ಪ್ರಿಯಾ ರಮೇಶ್, ಕಸಾಪ ನಗರಾಧ್ಯಕ್ಷೆ ಸರಸ್ವತಮ್ಮ, ಜ್ಞಾನೇಶ್, ನದೀಮ್‌ಪಾಷ, ನೆಲಮನೆ ಯಶ್, ಪ್ರಭಾಕರ್, ಪ್ರದೀಪ್, ಶಿವಕುಮಾರ್, ರವಿಚಂದ್ರ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!