ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡರ 58ನೇ ಜನ್ಮದಿನದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಮಳವಳ್ಳಿ ತಾಲೂಕು ಕರವೇ ಘಟಕದ ವತಿಯಿಂದ ವಿತರಿಸಲಾಯಿತು.
ನಂತರ ತಾಲೂಕು ಅಧ್ಯಕ್ಷ ಅಪ್ಪೇಗೌಡ ಮಾತನಾಡಿ ಹೋರಾಟ ಮತ್ತು ಚಳವಳಿ ಗಳ ಮೂಲಕ ಕನ್ನಡದ ನೆಲ, ಜಲ, ಭಾಷೆ, ಸಂಸ್ಕೃತಿಯ ಉಳಿವಿಗೆ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸಿ ಕನ್ನಡದ ಜನಪರ ಕಾರ್ಯಗಳಲ್ಲಿ ತೊಡಗಿದ್ದಾರೆ. ಇಂತವರಿಗೆ ದೇವರು ಇನ್ನೂ ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಕೋರಿದರು.
ಈ ವೇಳೆಯಲ್ಲಿ ತಾಲೂಕು ಕರವೇ ಘಟಕದ ಮಹಿಳಾ ಅಧ್ಯಕ್ಷೆ ವಿಜಯ ಹಲಗೂರು, ಅಧ್ಯಕ್ಷ ಗಂಗರಾಜು, ಹೋಬಳಿ ಘಟಕದ ಅಧ್ಯಕ್ಷ ದೇವರಾಜು, ಕಾರ್ಯದರ್ಶಿ ಲಿಂಗರಾಜು, ಸದಸ್ಯರಾದ ಮಲ್ಲಿಕಾರ್ಜುನ, ಶೇಖರ್, ನಾಗರಾಜು, ಗುರುಮೂರ್ತಿ ಹಾಗೂ ಲಿಂಗಚಾರಿ ಸೇರಿದಂತೆ ಇತರರು ಇದ್ದರು.