ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಮೆಣಸಗೆರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಪಟೇಲ್ ಉಮೇಶ್ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷರಾದ ಎಂ.ಕೆ. ಮಹದೇವು ಅವರು ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಪಟೇಲ್ ಉಮೇಶ್ ಅವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಪಟೇಲ್ ಉಮೇಶ್ ಅವರ ಆಯ್ಕೆಯನ್ನು ಚುನಾವಣಾಧಿಕಾರಿ ತಾಲೂಕು ಪಂಚಾಯಿತಿ ಇಓ ಎಲ್.ಸಂದೀಪ್ ಘೋಷಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪಟೇಲ್ ಉಮೇಶ್ ಅವರು ಮಾತನಾಡಿ,ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಎಲ್ಲಾ ಸದಸ್ಯರ ಜೊತೆಗೂಡಿ ಕೈಜೋಡಿಸುತ್ತೇನೆ.
ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು, ಚರಂಡಿ ಸ್ವಚ್ಛತೆ, ಬೀದಿ ದೀಪದ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶಿಲ್ಪ ಶ್ರೀನಿವಾಸ್, ಸದಸ್ಯರಾದ ರುದ್ರಮ್ಮ, ಶೋಭ ಒಡೆಯರ್, ಉಮಾದೇವಿ, ಪುಷ್ಪ, ಪಾರ್ವತಮ್ಮ, ಅಶ್ವತ್ಗೌಡ, ಸಿದ್ದಲಿಂಗಸ್ವಾಮಿ, ಎಂ.ರಾಜು, ಮುತ್ತು, ಅಜಯ್, ಮುಖಂಡರಾದ ಎಂ.ಕೆ.ರಾಜಣ್ಣ, ಎಂ.ಬಿ.ಕೆಂಚೇಗೌಡ, ನಾರಾಯಣಗೌಡ, ಪುಟ್ಟಸ್ವಾಮಿ, ಗುಂಡ, ನಾಗರಾಜು ಸೇರಿದಂತೆ ಹಲವರಿದ್ದರು.