ಮಂಡ್ಯ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿವ್ಯಾಪ್ರಭು ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರ, ಶಾಂತಾ ಎಲ್. ಹುಲ್ಮನಿ ಅವರನ್ನು ನೂತನ ಸಿಇಓ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ದಿವ್ಯಾಪ್ರಭು ಅವರಿಗೆ ಸರ್ಕಾರ ಇನ್ನೂ ಯಾವುದೇ ಹುದ್ದೆ ತೋರಿಸಿಲ್ಲ.
2013ರಲ್ಲಿ ಶಾಂತ ಹುಲ್ಮನಿ ಅವರು ಮಂಡ್ಯದ ಉಪವಿಭಾಗಾಧಿಕಾರಿ ಯಾಗಿಯೂ ಸೇವೆ ಸಲ್ಲಿಸಿದ್ದರು.
ಈಗ ಮಂಡ್ಯ ಜಿ.ಪಂ.ಸಿಇಓ ಆಗಿ ನೇಮಕವಾಗಿದ್ದಾರೆ.