ರೈತರ ಪಕ್ಷ ಜೆಡಿಎಸ್
ರೈತರ ಪರ ಸದಾ ಯೋಚನೆ ಮಾಡುವ ಪಕ್ಷ ಒಂದಿದ್ದರೆ ಅದು ಜೆಡಿಎಸ್ ಮಾತ್ರ.ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಇರುವುದು, ಅತಿವೃಷ್ಟಿ,ಅನಾವೃಷ್ಟಿಯಿಂದ ಬೆಳೆಗೆ ಹಾನಿಯಾಗಿರುವುದು ಇದರ ಬಗ್ಗೆ ಸಂಪೂರ್ಣ ಅರಿವಿದ್ದ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ರಚಿಸಿ ಅಧಿಕಾರಕ್ಕೆ ಬಂದ ಕೂಡಲೇ ಸಾಲಮನ್ನಾ ಮಾಡುವ ಮೂಲಕ ರೈತನ ನೆರವಿಗೆ ನಿಂತರು.ಇಂದಿರುವ ಸರ್ಕಾರ ಅನ್ನದಾತನ ನೆರವಿಗೆ ನಿಲ್ಲತ್ತಿಲ್ಲ.ತಮ್ಮ ಕೋಮುವಾದಿ ನಿಲುವಿನಿಂದ ಸತ್ತವರಿಗೆ ಅವರ ಪಕ್ಷದ ಸಚಿವರೇ ಮನೆಗೆ ಹೋಗಿ 25-30 ಲಕ್ಷ ಕೊಡುತ್ತಾರೆ.ಬೇರೆಯವರು ಸತ್ತರೆ ಅಧಿಕಾರಿಗಳ್ನು ಕಳಿಸಿ ಒಂದೋ,ಎರಡೋ ಲಕ್ಷ ಕೊಡುತ್ತಾರೆ.ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರಿಗೆ
ಧಮ್ಮಿಲ್ಲ
ಹಲಾಲ್ ಕಟ್,ಹಿಜಾಬ್ ಅಂತೆಲ್ಲಾ ಕೆಲವು ಕೋಮುವಾದಿಗಳು ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಗಲಭೆ ಎಬ್ಬಿಸಿದ್ದಾರೆ.ಬಿಜೆಪಿ ಸರ್ಕಾರ ಅಧಿಕಾರಕ್ಕಾಗಿ ಕೋಮುವಾದಿಗಳ ಅಟ್ಟಹಾಸವನ್ನು ನೋಡಿಕೊಂಡು ಸುಮ್ಮನಿರುವಾಗ ಕುಮಾರಸ್ವಾಮಿ ಧೈರ್ಯದಿಂದ ನನಗೆ ಮತ ಮುಖ್ಯವಲ್ಲ.ಈ ನಾಡಿನ ಶಾಂತಿ ಮುಖ್ಯ ಅಂದು ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.ಆದರೆ ಕಾಂಗ್ರೆಸ್ ನಾಯಕರು ವೋಟು ಹೋಗುತ್ತದೆ ಎಂದು ಸುಮ್ಮನೆ ಕುಳಿತರು.ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರೇ ಕುಮಾರಸ್ವಾಮಿ ಮಾತಿಗೆ ಭಯಗೊಂಡು ನಂತರ ಕೋಮುವಾದಿಗಳ ವಿರುದ್ಧ ಮಾತನಾಡಲು ಶುರು ಮಾಡಿದರು.ಕುಮಾರಸ್ವಾಮಿ ಅವರಿಗೆ ಅಧಿಕಾರಕ್ಕಿಂತ ನಾಡಿನ ಶಾಂತಿಯೇ ಮುಖ್ಯ ಎಂದರು.