Tuesday, May 21, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಕೆ.ಎಸ್.ಭಗವಾನ್ ಹೇಳಿಕೆಗೆ ಖಂಡನೆ

ಒಕ್ಕಲಿಗ ಸಮುದಾಯ ಕುರಿತು ಕೆ.ಎಸ್ ಭಗವಾನ್ ಅವರ ಅಪಮಾನಕಾರಿ ಹೇಳಿಕೆ ನೀಡಿರುವುದನ್ನು ಒಕ್ಕಲಿಗರ ಸಂಘದ ಮಳವಳ್ಳಿ ತಾಲೂಕು ಅಧ್ಯಕ್ಷ ವಿ. ಪಿ ನಾಗೇಶ್ ಖಂಡಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಮಹಿಷ ದಸರಾ ಕಾರ್ಯಕ್ರಮದಲ್ಲಿ ಕೆ ಎನ್ ಭಗವಾನ್ ನೀಡಿರುವ ಒಕ್ಕಲಿಗ ಸಮುದಾಯದ ಅವಹೇಳನ ಹೇಳಿಕೆ ಖಂಡಿಸಿ ಮಾತಾಡಿದ ಅವರು, ಭಗವಾನ್ ಅವರೇ ಸಾಧ್ಯವಾದರೆ ಬಡತನ ನಿರ್ಮೂಲನೆ, ಜಾತೀಯತೆ ದೂರಮಾಡಿ, ಸಾಮರಸ್ಯಕ್ಕೆ ಹೋರಾಡಿ, ಕೇವಲ ಪ್ರಚಾರಕ್ಕೊಸ್ಕರ ಹೇಳಿಕೆ ನೀಡುವುದನ್ನು ಬಿಡಿ ಎಂದರು.

ಭಗವಾನ್ ಅವರು, ವಿವಾದ್ಮಾತಕ ಹೇಳಿಕೆಗಳನ್ನು ನೀಡಿ ಒಕ್ಕಲಿಗ ಸಮಾಜವನ್ನು ಕೆರಳಿಸುವ ಪ್ರಯತ್ನ ನಡೆಸಬಾರದು. ಅವರ ವಿರುದ್ದ ಸರ್ಕಾರ ಕೂಡಲೇ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!