ಅಪೂರ್ವ ಜನಬೆಂಬಲದೊಂದಿಗೆ ನಮ್ಮ ಸರ್ಕಾರ ರಚನೆಯಾಗಿ 6 ತಿಂಗಳು ಕಳೆದಿದೆ. ಹಲವಾರು ಸಾಧನೆಗಳಿಗೆ ಈ ಆರು ತಿಂಗಳು ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
19 ಲಕ್ಷ ರೈತರಿಗೆ 1,500 ಕೋಟಿ ಮೊತ್ತದ ಬೆಳೆ ವಿಮೆ ಒದಗಿಸಲಾಗಿದೆ. 9 ಲಕ್ಷ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಲಾಗಿದೆ. 40 ಸಾವಿರ ಕೃಷಿ ಹೊಂಡ ನಿರ್ಮಾಣವಾಗಿದೆ. 16 ಲಕ್ಷ ರೈತರಿಗೆ ಬೆಳೆ ಸಾಲ ಒದಗಿಸಲಾಗಿದೆ ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ಬರೆದು ಕೊಂಡಿದೆ.
ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ,
ಯಾವುದೇ ಯೋಜನೆಗಳಿಗೆ, ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗದಂತೆ ಹೆಚ್ಚಿನ ವೇಗದೊಂದಿಗೆ ಕೆಲಸ ಮಾಡುತ್ತಿದೆ ನಮ್ಮ ಸರ್ಕಾರ.
ನರೇಗಾ ಯೋಜನೆಯಿಂದ ಹಿಡಿದು ವಸತಿ ಯೋಜನೆಗಳವರೆಗೆ 6 ತಿಂಗಳಲ್ಲಿ ಗಣನೀಯ ಸಾಧನೆ ಮಾಡಲಾಗಿದೆ.… pic.twitter.com/joZc338JbM
— Karnataka Congress (@INCKarnataka) November 21, 2023
“>ನುಡಿದಂತೆ ನಡೆದಿದ್ದೇವೆ, ಚುನಾವಣೆಯ ಪೂರ್ವದಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಅಭಿವೃದ್ಧಿಪರ ಕೆಲಸಗಳೊಂದಿಗೆ ಜನಪರ ಯೋಜನೆಗಳನ್ನೂ ಸಮರ್ಥವಾಗಿ ಅನುಷ್ಠಾನ ಮಾಡಲಾಗಿದೆ. ಕಾಂಗ್ರೆಸ್ ಎಂದರೆ ಸಾಧನೆ, ಈ ಸಾಧನೆಯ ಹಾದಿಯಲ್ಲಿ ಮಹತ್ತರವಾದ ಮೈಲಿಗಲ್ಲುಗಳನ್ನು ಸ್ಥಾಪಿಸುವುದು ನಮ್ಮ ಗುರಿಯಾಗಿದೆ ಎಂದಿದೆ.
ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ, ಯಾವುದೇ ಯೋಜನೆಗಳಿಗೆ, ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗದಂತೆ ಹೆಚ್ಚಿನ ವೇಗದೊಂದಿಗೆ ಕೆಲಸ ಮಾಡುತ್ತಿದೆ ನಮ್ಮ ಸರ್ಕಾರ. ನರೇಗಾ ಯೋಜನೆಯಿಂದ ಹಿಡಿದು ವಸತಿ ಯೋಜನೆಗಳವರೆಗೆ 6 ತಿಂಗಳಲ್ಲಿ ಗಣನೀಯ ಸಾಧನೆ ಮಾಡಲಾಗಿದೆ ಎಂದು ತಿಳಿಸಿದೆ.