ಮಂಡ್ಯ ತಾಲ್ಲೂಕಿನ ಬಸರಾಳು ಗ್ರಾಮದಲ್ಲಿ ಶ್ರೀ ಜೈ ಭುವನೇಶ್ವರಿ ಆಟೋ ಮಾಲೀಕರ ಸಂಘ ಹಾಗೂ ಗೂಡ್ಸ್ ವಾಹನ ಮಾಲೀಕರ ಸಂಘದ ವತಿಯಿಂದ ಇಂದು 67ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಮಾತನಾಡಿ, ಬಸರಾಳಿನ ಆಟೋ ಚಾಲಕರು ಮತ್ತು ಮಾಲೀಕರು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿ. ನಾಡು-ನುಡಿ ರಕ್ಷಣೆಗಾಗಿ ನಾವೆಲ್ಲರೂ ಒಂದುಗೂಡಿ ಹೋರಾಟ ಮಾಡಬೇಕು. ನಾಡಿನ ನೆಲ, ಜಲಕ್ಕೆ ತೊಂದರೆಯಾಗುವ ಸಂದರ್ಭದಲ್ಲಿ ಪಕ್ಷಾತೀತವಾಗಿ ಒಂದುಗೂಡಬೇಕು ಎಂದು ಕರೆ ನೀಡಿದರು.
ಜೆಡಿಎಸ್ ವಕ್ತಾರ, ಮಹಾಲಿಂಗೇಗೌಡ ಮುದ್ದನ ಘಟ್ಟ ಮಾತನಾಡಿ ,ಕನ್ನಡ ರಾಜ್ಯೋತ್ಸವವನ್ನು ಮೌಲ್ಯಧಾರಿತವಾಗಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಿರುವುದು ತುಂಬಾ ಶ್ಲಾಘನೀಯ.
ನಾಡು-ನುಡಿ, ನೆಲ-ಜಲ- ಗಡಿ ಮುಂತಾದ ವಿಚಾರಗಳಲ್ಲಿ ಯುವಕ ಮಿತ್ರರು ಇಟ್ಟಿರುವ ಅಭಿಮಾನ ಮೆಚ್ಚುವ ಅಂಶ ಎಂದ ಅವರು, ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು. ಸಮಾರಂಭದಲ್ಲಿ ಬಸರಾಳು ಶಂಕರೇಗೌಡ, ಆಟೋ ಚಾಲಕರ ಸಂಘದ ಅಧ್ಯಕ್ಷ ಸಂತೋಷ್, ವಿ.ಜಿ. ಕುಮಾರ್ ಮುಂತಾದವರು ಹಾಜರಿದ್ದರು